ಗಣೇಶ ವಂದನೆ

ಏಕವಿಂಶತಿ ಮೋದಕಪ್ರಿಯ| ಮೂಕರನು ವಾಗ್ಮಿಗಳಮಾಳ್ಪ ಕೃ |
ಪಾಕರೇಶ ಕೃತಜ್ಞ ಕಾಮದ ಕಾಯೊ ಕೈಪಿಡಿದು ||
ಲೇಖಕಾಗ್ರಣಿ ಮನ್ಮನದ ದು| ರ್ವ್ಯಾಕುಲವ ಪರಿಹರಿಸು ದಯದಿ ಪಿ|
ನಾಕಿಭಾರ್ಯಾತನುಜ ಮೃದ್ಭವ ಪ್ರಾರ್ಥಿಸುವೆ ನಿನ್ನ ||

ಗಣೇಶ ಚತುರ್ಥಿಯಂದು ಗಣಪತಿಗೆ ನಮನ. ಜಗನ್ನಾಥ ದಾಸರ ಹರಿಕಥಾಮೃತ ಸಾರದ ಗಣಪತಿ ಸ್ತೋತ್ರದ ಈ ನುಡಿಯ ಮೂಲಕ. ಪಿನಾಕಿಭಾರ್ಯಾತನುಜ ಮೃದ್ಭವ ಎನ್ನುವದರಲ್ಲಿ ಗಣಪನ ಹುಟ್ಟಿನ ಕತೆಯನ್ನು ಎಷ್ಟು ಚನ್ನಾಗಿ ಹಿಡಿದಿಟ್ಟಿದ್ದಾರೆ ದಾಸರು. ಮನಸ್ಸಿನ ವ್ಯಾಕುಲತೆ, ದುರ್ವ್ಯಾಕುಲತೆಯನ್ನ ದೂರ ಮಾಡಲಿಕ್ಕೆ ಅದೇನೂ ಇಲ್ಲದವನನ್ನೇ ಬೇಡಬೇಕು. ಮನಸ್ಸಿನಲ್ಲಿ ವಿಚಾರಗಳ ಸ್ಪಷ್ಟತೆಗೆ ಬರವಣಿಗೆ ಸಹಾಯ ಮಾಡುತ್ತದೆ. ಅದಕ್ಕಾಗಿ ಲೇಖಕಾಗ್ರಣಿಯ ಸ್ಮರಣೆ.

ಇತ್ತೀಚೆಗೆ ಬ್ಲಾಗಿನಲ್ಲಿ ಏನನ್ನೂ ಬರೆದಿಲ್ಲ. ಬರೆಯಬೇಕು ಅಂದುಕೊಂಡ ವಿಶಯ ಬೇಕಾದಷ್ಟಿದೆ. ಮತ್ತೆ ಬರೆಯಲು ಆರಂಭಿಸಬೇಕು ಅಷ್ಟೆ.

ಆಕಾಶಾಧಿಪತಿ ಗಣಪ ಎಲ್ಲರ ಹಾದಿಯ ಎಡರುಗಳನ್ನ ನಿವಾರಿಸಿ ಅವಕಾಶಗಳನ್ನು ಒದಗಿಸಲಿ ಎನ್ನುವ ಪ್ರಾರ್ಥನೆಯೊಂದಿಗೆ ನಿಮಗೆಲ್ಲ ಗಣೇಶ್ ಚತುರ್ಥಿಯ ಶುಭಾಶಯಗಳು.

1 thoughts on “ಗಣೇಶ ವಂದನೆ

ನಿಮ್ಮ ಟಿಪ್ಪಣಿ ಬರೆಯಿರಿ