ಗುಂಡಿನ ಘಮಲು

ಮಗಳು ಚಲನಚಿತ್ರವೊಂದರ ನಾಯಕಿಯಾದಳು ಎನ್ನುವ ಖುಷಿಗೆ ಅಪ್ಪ ಸಹಜವಾಗಿ ಗುಂಡಿನ ಬಾಟಲಿ ತೆಗೆಯುತ್ತಾನೆ. ಮಗಳ ಗೆಳೆಯ ಮುನ್ನಾನೊಡನೆ ಹಂಚಿಕೊಳ್ಳುತ್ತಾ ತಾನೂ ಕುಡಿಯುತ್ತಾನೆ. ರಂಗೀಲಾ ಸಿನೆಮಾದ ಈ ಸೀನನ್ನು ಮೊದಲ ಬಾರಿಗೆ ನೋಡಿದಾಗ ಹೆಚ್ಚೇನು ಯೋಚಿಸಿದ ನೆನಪಿಲ್ಲ. ಆದರೆ ನಂತರದ ದಿನಗಳಲ್ಲಿ ಯಾವಗಲೋ ಒಮ್ಮೆ ಅನಿಸಿದ್ದೆಂದರೆ, ಮನೆಯಲ್ಲೆ ಹೆಂಡದ ಬಾಟಲಿಯನ್ನಿಂಟುಕೊಂಡು, ಖುಷಿಯಾದಾಗ ಮುಚ್ಚು ಮರೆ ಇಲ್ಲದೆ, ಜ್ಯೂಸು ಕುಡಿಯುವಷ್ಟೇ ಸಹಜವಾಗಿ ಹೆಂಡವನ್ನು ಕುಡಿಯುವಂಥ ಮಧ್ಯಮ ವರ್ಗದ ಮನೆಯನ್ನ ಮೊದಲು ತೋರಿಸಿದ್ದು ರಂಗೀಲಾ ಸಿನೆಮಾನೆ ಇರಬೇಕು ಅಂತ.

ರಂಗೀಲಾದ ಈ ಸೀನು ಮತ್ತೆ ನೆನಪಾದದ್ದು ನಿನ್ನೆ ಮೇ ತಿಂಗಳ ಮಯೂರದಲ್ಲಿ ಬಿ.ಆರ್.ಎಲ್ ಅವರ ಅಂಕಣದಲ್ಲಿ ಅವರು ಶ್ರೀನಾಥ್ ಮತ್ತು ತಮ್ಮ ಬಾಂಧವ್ಯದ ಬಗ್ಗೆ ಬರೆಯುತ್ತಾ*, ಹೇರಳವಾಗಿ ಗುಂಡು ಪ್ರಸಂಗಗಳನ್ನ ನೆನಪಿಸಿಕೊಂಡದ್ದನ್ನ ಓದಿದಾಗ. ಮಯೂರಕ್ಕೆ ಗುಂಡನ್ನ ಪರಿಚಯಿಸಿದವರು ಅವರೇ ಮೊದಲೇನೂ ಇರಲಿಕ್ಕಿಲ್ಲ. ಗುಂಡಿನ ಗಮ್ಮತ್ತನ್ನ, ತಮ್ಮ ತಮ್ಮ ಕುಡಿದು ಚಿತ್ತಾದದ್ದನ್ನ ಮಯೂರದಲ್ಲಿ ಬರೆದದ್ದನ್ನ ಓದಿದಾಗ ರಂಗೀಲಾದ ಬಗ್ಗೆ ಅನಿಸಿದ್ದು ನೆನಪಾಯ್ತು, ಮನಸ್ಸಿಗೆ ಒಂದಷ್ಟು ಕಸಿವಿಸಿ ಆಯ್ತು. ಹಾಗಂತ ಲೇಖನ ಇಷ್ಟ ಆಗಲಿಲ್ಲ ಅಂತಲ್ಲ. ಶ್ರೀನಾಥ ಮತ್ತು ತಮ್ಮ ಅಂತರಂಗದ ಸ್ನೇಹದ ಪರಿಯನ್ನ ಬಿಚ್ಚಿಕೊಡುವ, ಕಟ್ಟಿಕೊಡುವ ಲೇಖನ ಬಹಳ ಇಷ್ಟವಾಯಿತು. ಗುಂಡಿನ ಘಮಲು ಇಲ್ಲದೆಯೂ ಈ ಲೇಖನ ಇಷ್ಟವಾಗುತ್ತಿತ್ತು. ಗುಂಡಿನ ವಿಷಯವೂ ಅವರ ಸ್ನೇಹದ ಅವಿಭಾಜ್ಯ ಅಂಗವೇ ಆಗಿದೆಯೇನೋ, ಅದೇ ಕಾರಣಕ್ಕೆ ಲೇಖನದಲ್ಲಿ ಅದಿಲ್ಲದೇ ಇರಲು ಸಾದ್ಯವಿಲ್ಲವೇನೋ ಅಂತ ಅನಿಸಿದ್ದೂ ನಿಜ!

*********

ಇಲ್ಲಿ ಅಮೇರಿಕದಲ್ಲಿ ನನ್ನ ಸಹೋದ್ಯೋಗಿಗಳಿಬ್ಬರು ಹೇಳಿದ್ದನ್ನ ಬರೆದು ಇದನ್ನ ಮುಗಿಸುತ್ತೇನೆ,

ಒಬ್ಬ ಸಹೋದ್ಯೋಗಿ ಭಾರತದಿಂದ ಬಂದ ತನ್ನ ತಂದೆಯೊಂದಿಗೆ ಕುಳಿತು, ತನ್ನ ಮನೆಯಲ್ಲಿ, ಹಸಿರು ಬಾಟಲಿಯ ಬೀರನ್ನ ಹೀರುತ್ತಿದ್ದ. ೪/೫ ವರ್ಷದ ಅವನ ಮಗ ಅಲ್ಲೇ ಸುಳಿದಾಡುತ್ತಿದ್ದ. ಏನು ಕುಡಿಯುತ್ತಿದ್ದೀರಿ ಅಂತ ಅವನು ಕೇಳಿದಾಗ ಔಷಧಿ ಅಂತ ಹೇಳಿದರು ಅವನಿಗೆ. ಮರುದಿನ ಮಧ್ಯಾನ್ಹ ಅವನ ತಂದೆಗೆ ಮಗ ಹೇಳಿದ್ದು, ‘ದಾದಾಜೀ ಜಬ್ ಮೈ ಭೀ ಬಡಾ ಹೋ ಜಾವುಂಗಾ, ತಬ್ ವೊ ಗ್ರೀನ್ ಬಾಟಲ್ ವಾಲಾ ದವಾ ಪೀಯುಂಗಾ’.

ಇನ್ನೊಬ್ಬ ಸಹೋದ್ಯೋಗಿಯೂ ಇದೇ ರೀತಿ ‘ಔಷಧಿ’ ಎಂದು ಮನೆಯಲ್ಲೆ ಬಾಟಲಿಗಳನ್ನಿಡುತ್ತಿದ್ದ. ಮಗ ದೊಡ್ಡವನಾಗುತ್ತಿದ್ದಂತೆ ಸುಳ್ಳು ಹೇಳುವದು ಕಷ್ಟವಾಯಿತು. ಕಡೆಗೊಮ್ಮೆ ‘ಇದನ್ನು ಕುಡಿಯಬೇಡ’ ಅಂತ  ಮಗ  ಹೇಳಿದ ಮೇಲೆ ಈಗ ಕುಡಿಯುವದನ್ನ ಪೂರ್ತಿ ಬಿಟ್ಟುಬಿಟ್ಟಿದ್ದಾನೆ.

*ಪ್ರಣಯರಾಜನ ಸ್ನೇಹದ ಕಡಲಲ್ಲಿ – ‘ಒಡನಾಟ’ – ಬಿ.ಆರ್.ಲಕ್ಷ್ಮಣರಾವ್ – ಮಯೂರ, ಮೇ ೨೦೧೨, ಪುಟ ೪೬

ನೋಡಿ ಕಲಿ, ಮಾಡಿ ತಿಳಿ(ಸು)

ಓದುವ ಹವ್ಯಾಸ ಬರೆಯುವಾಗ ನನ್ನ ಓದಿನ ಚಟಕ್ಕೆ ಇಂಬು ಕೊಟ್ಟವರ ಬಗ್ಗೆ ಒಂದಷ್ಟು ಬರೆದರೂ ಇನ್ನೊ ಇದೆ ಅನಿಸಿತು. ಕುಳಿತುಕೊಂಡು ಯೋಚಿಸಿದಾಗ, ಮೂರ್ತಿರಾಯರ ದೇವರು ಪುಸ್ತಕವನ್ನ ಆದ್ಯಂತವಾಗಿ ಓದಿ, ನಿರ್ಭಾವುಕವಾಗಿ ಕೆಳಗಿಟ್ಟು ಎಲ್ಲ ಓದಬೇಕು, ಏನು ಬರೆದಿದ್ದಾರೆ ಅಂತ ನೋಡಬೇಕು” ಅಂದ ತಾತ, ಶಬ್ದಗಳನ್ನ, ಮಾತುಗಳನ್ನ ಚಮತ್ಕಾರಿಕವಾಗಿ ತಿರುಗಿಸಿ ನಗೆಯುಕ್ಕಿಸುವ ಇನ್ನೊಬ್ಬ ತಾತ, ಬೇಕಿದ್ದ ಹಾಡುಗಳನ್ನ ಬರೆದಿಟ್ಟುಕೊಳ್ಳುವ, ನಿತ್ಯ ಹಾಡುವ ಅಮ್ಮ, ಮಧ್ಯಾನ್ಹದ ಊಟ ಮತ್ತು ಮನೆಗೆಲಸವನ್ನೆಲ್ಲ ಮುಗಿಸಿದ ಮೇಲೆ ಮಲಗಲು ಅಂತ ಅಡ್ಡಾಗಿ ಹಾಗೇ ಅಂದಿನ ಪೇಪರನ್ನೋ ಅಥವಾ ಮತ್ಯಾವುದೋ ಪತ್ರಿಕೆಯನ್ನೋ ಓದುತ್ತಿದ್ದ ಅಜ್ಜಿ, ತಾವು ಸಣ್ಣವರಿದ್ದಾಗ ಅವರ ಹಿರಿಯರ ಸಂಗ್ರಹದ ಕನ್ನಡ ಪುಸ್ತಕಗಳನ್ನೆಲ್ಲ ಹೇಗೆ ಓದಿದ್ದರು ಎಂದು ಹೇಳಿದ ಅಪ್ಪ, ತಮ್ಮ ಕಾಲೇಜು ಲೈಬ್ರರಿಗೆ ಕರೆದೊಯ್ದು, ಅಲ್ಲಿ ನಮಗೆ ಇಷ್ಟವಾದ ಪುಸ್ತಕಗಳನ್ನ ಮನೆಗೆ ತರಲು ಅನುವು ಮಾಡಿಕೊಡುತ್ತಿದ್ದ ದೊಡ್ಡಪ್ಪ, ಹೇರಳವಾಗಿ ಪುಸ್ತಕಗಳನ್ನ ಸಂಗ್ರಹಿಸಿಟ್ಟಿರುವ ಚಿಕ್ಕಪ್ಪ, ಇವರೆಲ್ಲರ ನೆನಪಾಗುತ್ತದೆ.

ಇದ್ದ ಪರಿಸರದಲ್ಲಿ, ಕಣ್ಣ ಮುಂದೆ ಹಿರಿಯರು ಮಾಡುವುದನ್ನೇ ನೋಡಿ ನೋಡಿ ನಾನೂ ಪುಸ್ತಕವನ್ನು ಹಿಡಿಯಬೇಕು ಅಂತ ಅನಿಸಿದ್ದರಲ್ಲಿ ಆಶ್ಚರ್ಯವಿಲ್ಲ. ಇಂದಿನ ದಿನಗಳಲ್ಲಿ ಇಂತಹ ರೋಲ್ ಮಾಡೆಲ್ಲುಗಳನ್ನ ನಾವು ಒದಗಿಸಬಲ್ಲೆವೆ ಎನ್ನುವ ಪ್ರಶ್ನೆ ಬರುತ್ತಿದೆ ಇತ್ತೀಚೆಗೆ. ಕೈಯಲ್ಲಿ ಪುಸ್ತಕ, ಮ್ಯಾಗಝೀನುಗಳನ್ನ ಹಿಡಿಯುವ ಅವಶ್ಯಕತೆಯಿಲ್ಲ, ಒಂದು ಐ-ಪ್ಯಾಡಿನಲ್ಲಿ, ಕಿಂಡಲ್ಲಿನಲ್ಲಿ ನಾವು ಓದಿದ್ದನ್ನ ಹೇಳಿಕೊಳ್ಳದಿದ್ದರೆ, ಇನ್ನೊಬ್ಬರಿಗೆ (ಮನೆಯಲ್ಲೇ ಇರುವ ಮಕ್ಕಳಿಗೆ)  ಗೊತ್ತೇ ಆಗುವದಿಲ್ಲ. ಮಕ್ಕಳ ಬೆಳವಣಿಗೆಯಲ್ಲಿ ‘ನೋಡಿ ಕಲಿ’ ಯ ಪಾತ್ರ ಬಹಳ ದೊಡ್ಡದಲ್ಲವೇ?

*****

ಬಗೆ ಬಗೆಯ ಪುಸ್ತಕಳನ್ನ ಓದುವ ಚಟವಿದ್ದರೂ ಓದಿದ ವಿಷಯಗಳನ್ನ ನಿತ್ಯ ಜೀವನದಲ್ಲಿ ಸಮರ್ಥವಾಗಿ ಅಳವಡಿಸಿಕೊಳ್ಳುವದನ್ನ ನಾನು ಹೆಚ್ಚಾಗಿ ಕಲಿತಿರಲೇ ಇಲ್ಲ. ಅದನ್ನ ಹೆಚ್ಚು ಹೆಚ್ಚಾಗಿ ಕಲಿಯಬೇಕು ಅನಿಸಿದ್ದು, ಕಲಿಯಲು ಆರಂಭಿಸಿದ್ದು ನನ್ನ ದೊಡ್ಡಪ್ಪನನ್ನ ನೋಡಿ. ‘ನಾನು ಪುಸ್ತಕ ಓದಂಗಿಲ್ಲ ನೋಡು, ಯಾಕಂದರ ಪುಸ್ತಕ ಓದಿಕೋತ ಕೂತರ ಮಾಡಬೇಕಾದ್ದ ಕೆಲಸ ಮರ್ತ್ ಹೋಗ್ತದ’ ಎಂದು ಹೇಳಿ ಆಶ್ಚರ್ಯಗೊಳಿಸಿದ್ದರು ಒಮ್ಮೆ. ಹಾಗಂತ ಅವರು ಪುಸ್ತಕ ಓದುವದೇ ಇಲ್ಲ ಅಥವಾ ಓದೇ ಇಲ್ಲ ಅಂತಲ್ಲ. ತಾವು ಓದಿದ ಪುಸ್ತಕಗಳ ಮಾತನ್ನ, ತಮ್ಮ ಅನುಭವಗಳನ್ನ ತಟ್ಟನೇ ನಾಟುವಂತೆ ಹೇಳಿಬಿಡುತ್ತಾರೆ. ಅದು ಬರೀ ಹೇಳಿಕೆಯಲ್ಲ, ಅವರು ಆಚರಿಸಿದ್ದೇ ಆಗಿರುತ್ತದೆ. ನಾನು ಏನೂ ಓದುವುದಿಲ್ಲ ಎನ್ನುವವರ ಮಾತಿನಲ್ಲಿ ಸಂದರ್ಭೋಚಿತವಾಗಿ, ‘ತಾನು ಬ್ರಾಹ್ಮಣ್ಯ ಬಿಟ್ಟರೂ ಬ್ರಾಹ್ಮಣ್ಯ ತನ್ನನ್ನು ಬಿಡಲಿಲ್ಲ’ ಎನ್ನುವ ‘ಸಂಸ್ಕಾರ’ದ ಮಾತು ಬರುತ್ತದೆ, ‘ಸಿಂಬಳದಾಗಿನ ನೊಣದ ಗತೆ ಅಲ್ಲಲ್ಲೆ ಹೊಲಸಿನ್ಯಾಗ ಸುತ್ತಬ್ಯಾಡ್ರಲೇ’ ಅಂತ ಕಗ್ಗದ ಮಾತೂ ಬರುತ್ತದೆ. ಅವರು ಬಳಸುವ ಗಾದೆಗಳು, ನುಡಿಗಟ್ಟುಗಳು ಸಂದರ್ಭದ ಸಾರವನ್ನು ಹಿಡಿದಿಡುತ್ತವೆ. ಮಾಡಬೇಕಾದ ಕೆಲಸದ ಬಗ್ಗೆ ಎಚ್ಚರವಿರುವವರು ಇತರರೊಂದಿಗೆ ಮತ್ತು ಅದಕ್ಕಿಂತ ಮುಖ್ಯವಾಗಿ ತಮಗೆ ತಾವೇ ಹೇಗೆ ಖಚಿತ ಶಬ್ದಗಳನ್ನು ಬಳಸಿ ಸಂವಹಿಸಬೇಕು ಎನ್ನುವದನ್ನ ತೋರಿಸುತ್ತವೆ.

ಓದುವ ಬಗ್ಗೆ ದೊಡ್ಡಪ್ಪ ಹೇಳಿದಂಥದೇ ಮಾತನ್ನ ಜಾನ್ ಮುಯಿರ್ ಪುಸ್ತಕಗಳ ಬಗ್ಗೆ ಹೇಳಿದ್ದನ್ನ ಓದಿದ್ದೆ ಒಂದು ಪುಸ್ತಕದಲ್ಲಿ. ಸ್ಯಾನ್ ಹೋಸೆ ಲೈಬ್ರರಿಯಿಂದ ತಂದಿದ್ದ ಪುಸ್ತಕದಲ್ಲಿನ ಆ ಸಾಲುಗಳನ್ನ ಬರೆದಿಟ್ಟುಕೊಂಡಿದ್ದೆ.

I have a low opinion of books; they are but piles of stones set up to show coming travelers where other minds have been, or at best signal smokes to call attention…No amount of word-making will ever make a single soul to know these mountains. As well seek to warm the naked and frost-bitten by lectures on caloric and pictures of flames. One day’s exposure to mountains is better than cartloads of books.

                                                                                                           - John Muir on books

(ಜಾನ್ ಮುಯಿರ್ ಒಬ್ಬ ಸ್ಕಾಟಿಷ್-ಅಮೇರಿಕನ್  ನ್ಯಾಚುರಲಿಸ್ಟ್. ಅಮೇರಿಕಾದ ಪಶ್ಚಿಮ ತೀರದ ಹತ್ತಿರದ ಸಿಯೆರಾ ನೆವಾಡ ಬೆಟ್ಟಗಳಲ್ಲಿ, ಅಲ್ಲಿಯ ಕಾಡಿನಲ್ಲಿ ಬಹಳಷ್ಟು ಸಮಯ ಕಳೆದಾತ. ತನ್ನ ಬರವಣಿಗೆಯಿಂದ ಬಹಳಷ್ಟು ಜನರನ್ನೂ, ಅಮೇರಿಕಾದ ಸರಕಾರವನ್ನೂ ಪ್ರಭಾವಿತಗೊಳಿಸಿದಾತ. ಅಮೇರಿಕಾದ ನ್ಯಾಶನಲ್ ಪಾರ್ಕುಗಳ ಪಿತಾಮಹನೆಂದು ಈತನನ್ನು ಕರೆಯುತ್ತಾರೆ. ಅವನ ಬಗ್ಗೆ ಇನ್ನಷ್ಟು ಮಾಹಿತಿಯನ್ನು ವಿಕಿಪೀಡಿಯಾದ ಈ ಪುಟದಲ್ಲಿ ನೋಡಬಹುದು. ಅವನ ಹೇಳಿಕೆಗಳ ಸಂಗ್ರಹವೊಂದು ಇಲ್ಲಿದೆ)

ಕೆಲಸವಾದ ಬಳಿಕ

ಬಂದ ಕೆಲಸವಾದ ಬಳಿಕ ಉಳಿಯಬಾರದು
ಬಂದ ಕೆಲಸವಾದ ಬಳಿಕ ಉಳಿಯಲಾಗದು

ಕೆಲಸವೊಂದು ಕೈಯಲಿರಲು
ಹಲವು ಹೊಸತನೆತ್ತಿಕೊಂಡು
ಹಳತು ಹೊಸತು ಮಿಳಿಸಿಕೊಂಡು
ನಾಳೆ ಫಸಲನೆಣಿಸಿ ಗುಣಿಸಿ

ಕಳೆದ ಕಾಲ ಸಾರ್ಥವಾಯ್ತ
ಕಲಿತ ಮಾತು ಅರ್ಥವಾಯ್ತ
ತಿಳಿದ ತಿಳಿವು ತೀರ್ಥವಾಯ್ತ
ಫಲಿತವಾಯ್ತ ಪತಿತವಾಯ್ತ

ಪೂರ್ಣವವನ ಗಣಿತ ಪೂರ್ಣ
ಪೂರ್ಣವುಸಿರಿನಾಟ ಪೂರ್ಣ
ಪೂರ್ಣಗೊಳ್ಳದಿದ್ದಪೂರ್ಣ
ಪೂರ್ಣಗೀಯಲೆಲ್ಲ ಪೂರ್ಣ

ಯತ್ಕೃತಮ್ ತು ಮಯಾ ದೇವ
ಪರಿಪೂರ್ಣಮ್ ತದಸ್ತು ಮೇ

‘ಕೆಲಸ ಆದ ಕೂಡ್ಲೆ ಎದ್ದು ಬಿಡೋದನ್ನ ನಮ್ಮಪ್ಪ ಮತ್ತ ನಮ್ಮಣ್ಣ ಯಾವಾಗಲೂ ಪಾಲಸ್ತಾರ’ ಅಂತ ನನ್ನಪ್ಪ ಎಷ್ಟೋ ಬಾರಿ ಹೇಳಿದ್ದಾರೆ. ಅದಕ್ಕೆ ತಕ್ಕಂತೆ ‘ಕೆಲಸಾದ ಕೂಡ್ಲೆ ಜಾಗ ಬಿಟ್ಬಿಡ್ತೀನಿ’ ಅಂತ ದೊಡ್ಡಪ್ಪನೇ ಹೇಳಿದ್ದಾರೆ ಮತ್ತು ಅದರಂತೆ ಮಾಡ್ತಾರೆ. ‘ನಮ್ಮದೇನ ಕೆಲಸದ ಅಲ್ಲೆ. ನೀವು ಹೋಗಿ ಬರ್ರಿ’ ಅಂತ  ಹೇಳಿ ಮನೆಯಲ್ಲೇ ಉಳಿಯುತ್ತಿದ್ದ ತಾತನ ನೆನಪೂ ಇದೆ.

ಇಂಟರ್ನೆಟ್ಟನ್ನೋ ಜಗತ್ತಿನ ಕಿಟಕಿ ಮೂಲಕ ನನ್ನ ಆಫೀಸಿನ ಕೆಲಸವೂ ಆಗ್ತದೆ ಮತ್ತು ಏನೆಲ್ಲ ವಿಷಯಗಳ ಬಗ್ಗೆ ತಿಳಿದುಕೊಳ್ಳಲಿಕ್ಕೂ ಆಗ್ತದೆ. ಮನಸ್ಸು ಪಾತರಗಿತ್ತಿಯಂತೆ ಹಾರಿಕೊಂಡೆ ಇರಬಹುದು. ಅಂತ್ಯ ಪಾರವಿಲ್ಲದ  ಲೋಕದೊಳಗೆ ಕಳೆದು ಹೋಗುವದು ಬಹಳ ಸುಲಭ. ಒಂದು ಕೆಲಸ ಮಾಡಿ ಮುಗಿಸುವ ಮುನ್ನವೇ ಮನಸ್ಸು ಮುಂದಿನ ಹತ್ತು ಕೆಲಸಗಳ ಬಗ್ಗೆ ಯೋಚಿಸುತ್ತಿರುತ್ತದೆ. ಎಷ್ಟೋ ಸಾರಿ ಇಲ್ಲಿಂದ ಯಾವಾಗಲೋ ಅಲ್ಲಿ ಹಾರಿಹೋಗಿ ಆ ಕೆಲಸವನ್ನೇ ಆರಂಭಿಸಿಬಿಟ್ಟಿರುತ್ತದೆ. ಅಥವಾ ಒಮ್ಮೊಮ್ಮೆ, ಮಾಡಬೇಕಾದ ಕೆಲಸ, ಒಪ್ಪಿಕೊಂಡ ಕೆಲಸ, ತಪ್ಪಿಸಿಕೊಳ್ಳಲಾಗದೆ ಒಪ್ಪಿಕೊಂಡ ಕೆಲಸ, ಮಾಡಬೇಕು ಎಂದುಕೊಂಡ ಕೆಲಸ, ಓದಬೇಕು ಎಂದುಕೊಂಡ ಪುಸ್ತಕ, ಬ್ಲಾಗು, ಬರವಣಿಗೆ, ಧುತ್ತನೆ ಎದುರಾದ ಕೆಲಸ, ಎಲ್ಲವೂ ಗಾಳಿಯಲ್ಲಿ ಹಾರಿಸಿದ ಚಂಡುಗಳು ಒಟ್ಟಿಗೆ ಕೆಳಗಿಳಿದು ಬಂದಂತೆ ಎದುರಾದಾಗ ಮನಸ್ಸು ಅಲ್ಲಿಷ್ಟು ಇಲ್ಲಿಷ್ಟು ಹರಿದು ಹಂಚಿ ದಣಿದುಬಿಡುವಾಗ ‘ಒಂದು ರೂಪದೊಳನಂತ ರೂಪ’, ‘ಒಂದು ಗುಣದೊಳಗನಂತ ಗುಣ, ಒಂದೊಂದು ಗುಣವೂ ಪರಿಪೂರ್ಣ’, ‘ಅವನ ಗುಣಗಳು ಅಚಿಂತ್ಯಾದ್ಭುತ’ ಮುಂತಾದ ಸಾಲುಗಳು ನೆನಪಾದರೆ ಭಗವಂತನ ಬಗ್ಗೆ ಹೊಸತೊಂದು ಬೆರಗು. ಇವತ್ತಿನ  virtual machine, hypervisor ಗಳ ನೆನಪಾದರೆ ಆ ಕ್ಷಣಕ್ಕೆ ಹೊಸತೊಂದು ‘virtual me’ ಹುಟ್ಟುಹಾಕಿ ಇನ್ನೊಂದರ ಜೊತೆಗೆ ಅದರ context ಸಂಕರವಾಗದೆ ಅದರಷ್ಟಕ್ಕೆ ಅದು ಕೆಲಸಪೂರ್ತಿ ಮಾಡಬರುವಂತಿದ್ದರೆ ಎನ್ನುವ ‘ರೆ’ ಕಾರ.

ಭಗವಂತನಂತೂ ಆಗಲು ಸಾಧ್ಯವಿಲ್ಲ. ಆದರೆ ನನ್ನದೇ ಒಂದು ’virtual me’ ಮಾಡಬಹುದೆ? ಮಾಡಿದರೆ ಹೇಗೆ ಮಾಡ ಬಹುದು?

ಮೊದಲಿಗೆ ‘real me’ ಕೆಲಸವೇನು, ಅದರ ಉಪಕೆಲಸಗಳೇನು, ಅವುಗಳನ್ನು ಮಾಡುವ ಕ್ರಮ ಏನು ಎನ್ನುವದನ್ನ ನೋಡಿಕೊಳ್ಳಬೇಕು. ಆ ಕೆಲಸಕ್ಕೆ ವೇಳೆಯನ್ನೂ, ಬೇಕಾಗುವ ಸಲಕರಣೆಗಳನ್ನೂ ಹೊಂದಿಸಿಕೊಳ್ಳಬೇಕು. ಆ ವೇಳೆಗೆ ಕೆಲಸದ ಸಂಕಲ್ಪ ಮಾಡಬೇಕು. ಕೆಲಸವನ್ನು (ಅಥವಾ ಉಪಕೆಲಸಗಳನ್ನು ಕ್ರಮಬದ್ಧವಾಗಿ) ‘virtual me’ ಗೆ ವಹಿಸಿಕೊಡಬೇಕು. ಎಲ್ಲ ಉಪಕೆಲಸಗಳೂ ಮುಗಿಯುತ್ತ ಬಂದಂತೆ ಕೆಲಸವೂ ಮುಗಿಯುತ್ತಿರುತ್ತದೆ. ‘virtual me’ ಕೊನೆಯ ಉಪಕೆಲಸವನ್ನು ಮುಗಿಸಿದಾಗ ‘real me’ ಎಲ್ಲವನ್ನೂ ಗಮನಿಸಿ ಕೆಲಸವನ್ನು ಮುಗಿಸಬೇಕು. ಅದರಿಂದ ಕಲಿಯಬೇಕಾದ್ದನ್ನು ಕಲಿಯಬೇಕು ಮತ್ತು ಮುಂದೆ ಬಳಸಲು ಅನುಕೂಲವಾಗುವಂತೆ ಸೂಕ್ತವಾಗಿ ಸಂಗ್ರಹಿಸಬೇಕು. ಸಂಗ್ರಹ ನೆನಪಿನಲ್ಲಿ, ಪುಸ್ತಕದಲ್ಲಿ, ಕಂಪ್ಯೂಟರಿನಲ್ಲಿ ಅಥವಾ ಇನ್ನೆಲ್ಲಿಯಾದರೂ ಆಗಬಹುದು. ಎಲ್ಲಿ ಅದು ಸಿಗುತ್ತದೆ ಎನ್ನುವದು ‘real me’ ಗೆ ಗೊತ್ತಿರಬೇಕು.

‘Operation successful but the patient died’ ಅನ್ನುವಂತೆ ಆ ಕೆಲಸಕ್ಕೆ ಅಂದುಕೊಂಡ ಪರಿಣಾಮ ಸಿಗದಿದ್ದರೆ? ನಾನೆಂಬ ‘real me’ ಯ ಕೆಲಸವೇನು ಮತ್ತೆ? ಒಂದು ಪೂರ್ತಿ ಕೆಲಸವನ್ನು ಒಟ್ಟಿಗೆ ನಡೆಸಬೇಕೆ, ಪ್ರತಿಯೊಂದು ಘಟ್ಟದಲ್ಲೂ ‘virtual me’ ಯ ಕೆಲಸದ ಪರಿಣಾಮ ಗಮನಿಸಿ ಬೇಕಾದ ಬದಲಾವಣಗಳೊಡನೆ ಮುಂದಿನ ‘virtual me’ ಯನ್ನು ಶುರುಮಾಡಬೇಕೆ ಎನ್ನುವ ಎಲ್ಲ ನಿರ್ಧಾರಗಳನ್ನೂ ತೆಗೆದುಕೊಳ್ಳಬೇಕಾದ್ದು ’real me’. ಒಂದು ಕೆಲಸದಿಂದ  ಅರಿತದ್ದನ್ನ ಮುಂದೆ ದುಡಿಸಿಕೊಳ್ಳುವದೂ ‘real me’.  ಒಂದು ಕೆಲಸ ನಡೆಯುವಾಗ ತುರ್ತೇನೋ ಬರುತ್ತದೆ, ಇನ್ನೊಂದು ಕಡೆ ಗಮನ ಕೊಡಬೇಕಾಗುತ್ತದೆ. ಆಗ  ’real me’ ಮುಂದೆ ಬರಬೇಕು, ನಿರ್ಣಯ ‘real me’ ಯದ್ದೇ.

‘virtual me’ ಎಂಬ ಕೂಲಿ ಆಳಿನ್ನೂ ಮತ್ತು ‘real me’ ಎಂಬ ಮಾಲೀಕನನ್ನೂ ಪ್ರತ್ಯೇಕಿಸುವದು ಹೇಗೆ? ಪ್ರತ್ಯೇಕಿಸಬೇಕೆ? ಆಳಿನಲ್ಲೊಬ್ಬ ಮಾಲೀಕ, ಮಾಲೀಕನಲ್ಲೊಬ್ಬ ಆಳು ಇರಲೇಬೇಕು. ಉಪಕೆಲಸಗಳ ಪ್ರತಿ ಹಂತವನ್ನೂ ಮೊದಲೇ ನಿರ್ಧರಿಸಿ ಆಳಿಗೆ ಕೊಡಬೇಕೆಂತಿಲ್ಲ. ಮಾಲೀಕನ ಮೂಲಭೂತ ತತ್ವಗಳ ಪ್ರಶ್ನೆ ಬಂದಾಗ ಮಾಲೀಕನದ್ದೇ ನಿರ್ಣಯ. ಉಳಿದಂತೆ ’Things seem more right when you are doing them than when you are thinking about them*’ ಎಂದುಕೊಂಡು ಮಾಡಲು ಆಳಿಗೆ ಬಿಡಬೇಕು. ಪ್ರತಿ ಕೆಲಸದ ಪರಿಣಾಮವನ್ನು ’ಸರ್ವ ಕರ್ಮಾಖಿಲಂ ಜ್ಞಾನೇನ ಪರಿಸಮಾಪ್ಯತೆ’ ಎಂದುಕೊಂಡು ಮಾಲೀಕನಾಗಿ ಅರಿಯುತ್ತ ಹೋದಂತೆ, ಆ ಅರಿವಿನಿಂದ ಆಳನ್ನು ತಿದ್ದಿದಂತೆ, ಆಳು ಮತ್ತು ಮಾಲೀಕರಿಬ್ಬರೂ ಬೆಳೆಯುತ್ತ ಹೋಗುತ್ತಾರೆ.

ಕೊನೆಗೊಂದು ದಿವಸ ಕರೆ ಬಂದಾಗ ಯಾವ ಯಾವ ‘virtual me’ ಗಳು ಎಲ್ಲೆಲ್ಲಿ ಇದ್ದವೋ ಅಲ್ಲಲ್ಲೇ ಬಿಟ್ಟು ಹೊರಡಬೇಕಾಗುತ್ತದೆ. ಯಾಕೆಂದರೆ ಮಾಲೀಕನೂ ನಿಜವಾದ ಮಾಲೀಕನಲ್ಲವಲ್ಲ! ಆ ಕ್ಷಣಕ್ಕೆ ‘virtual me’ ಮತ್ತು ‘real me’ ಗಳು ಮಾಡ್ತಾ ಇದ್ದದ್ದು ಅಲ್ಲಿಗೇ ಪೂರ್ಣ. ‘ಯತ್ಕೃತಂ ತು ಮಯಾ ದೇವ ಪರಿಪೂರ್ಣಮ್ ತದಸ್ತು ಮೇ’. ಇಲ್ಲಿ ಯಾವುದೂ ವ್ಯರ್ಥವಲ್ಲ, ‘ನೇಹಾಭಿಕ್ರಮ ನಾಶೋಸ್ತಿ, ಪ್ರತ್ಯವಾಯೋ ನ ವಿದ್ಯತೆ’!

ಈ ‘virtual’ ವಿಚಾರ ಎಲ್ಲಿಗೆ ಕೊಂಡೊಯ್ಯುವುದೋ ನೋಡೋಣ ಅಂತ ಇದನ್ನೆಲ್ಲಾ ಬರೆಯುತ್ತ ಹೊರಟವನಿಗೆ ಕೊನೆಗೆ ಅನಿಸಿದ್ದು, ಇಷ್ಟೆಲ್ಲಾ ಕಷ್ಟ ಏಕೆ? ದಿವಸ ಸಂಧ್ಯಾ ವಂದನೆ ಮಾಡಿದರೆ ಆಯಿತು. ಆಚಮನ, ಸಂಕಲ್ಪ, ಮಾರ್ಜನ, ಭೂತೋಚ್ಛಾಟನ, ಧ್ಯಾನ, ಜಪ, ಸಮರ್ಪಣಗಳೆಲ್ಲವನ್ನ  ಕ್ರಮವಾಗಿ ಮಾಡುವದನ್ನೇ  ಅಭ್ಯಾಸ ಮಾಡ್ತಾ ಅದನ್ನೇ ಉಳಿದ ಕೆಲಸಗಳಿಗೂ ಅನ್ವಯಿಸಿದರೆ ಬೇಕಾದಷ್ಟು ಪ್ರೊಡಕ್ಟಿವ್ ಆಗುವದು ಅಂತ.  ಸ್ಟೀವ್ ಜಾಬ್ಸ್ ಹೇಳಿದ ‘Your time is limited’ ಎನ್ನುವ ಮಂತ್ರ ಹಿಡಿದರಂತೂ ಇನ್ನೂ ಒಳ್ಳೆಯದು. ಈ ಸಮಯ ಎಷ್ಟು ಸೀಮಿತವಾದದ್ದು ಅನ್ನುವದರ ಪ್ರತ್ಯಕ್ಷ ಅನುಭವ ಬಹಳಷ್ಟು ಬಾರಿ ಆಗಿದೆಯಾದರೂ ಕಳೆದ ಬಾರಿಯ ಭಾರತಕ್ಕೆ ಹೋದಾಗ ಕಂಡ ತಾತನ ಕೊನೆಯ ಒಂದು ವಾರ, ಕೊನೆಯ ಗಳಿಗೆ, ಆ ಸಂದರ್ಭ ಮರೆಯುವಂತಿಲ್ಲ. ಎಲ್ಲ ಆದ ಮೇಲೆ ಅಲ್ಲೂ ತಾತ ಸರಿಯಾಗಿ ಲೆಕ್ಕ ಹಾಕಿಕೊಂಡಂತೆ ಎದ್ದು ಹೋಗಿಬಿಟ್ಟ ಅನಿಸಿತು. ಈ ತಾತನಿಗೆ ಮುಂಚೆ ನನ್ನ ಅಮ್ಮನ ಅಪ್ಪ ಎಂಕಣ್ಣ ತಾತನಂತೂ ‘ತೊಂಭತ್ತು ವರ್ಷದ ಆಯುಷ್ಯ ಅದ, ಅದು ಮುಗಿದ ಗಳಿಗೆ ಹೋಗಿಬಿಡ್ತೀನಿ’ ಅಂತಿದ್ದಾತ ಅದರಂತೆ ತನ್ನ ೯೦ನೇ ಹುಟ್ಟು ಹಬ್ಬದ ದಿನವೇ ಹೊರಟು ಬಿಟ್ಟ. ಅವರಿಬ್ಬರ ಕೊನೆ ಮನಸ್ಸಿನಲ್ಲಿ ಆಗಾಗ ಹಣಕಿ ಇಂಥದ್ದನ್ನೆಲ್ಲ ಯೋಚಿಸುವಂತೆ ಮಾಡುತ್ತದೆ. ಇದರ ಉಪಯೋಗ ನಿಜವಾಗಿ ಆಗುವದು ಈ ಎಲ್ಲ ಯೋಚನೆಗಳ ಪರಿಣಾಮ ಸತತವಾಗಿ ನನ್ನ ಕೆಲಸಗಳಲ್ಲಿ ಕಾಣಿಸತೊಡಗಿದಾಗ. ಆ ದಿನ ಇನ್ನೂ ಬಂದಿಲ್ಲ, ನಿತ್ಯ ಪ್ರಯತ್ನ ಅದರದ್ದೇ!

(* – ‘Things seem more right …’ is a line I picked up from one of the short stories by John Steinbeck. I think the story is ‘To kill a white quail’ )

(ಒಂದಾರು ತಿಂಗಳಿಂದ ಡ್ರಾಫ್ಟಾಗಿ ಉಳಿದಿತ್ತು. ಇವತ್ತು ಕಡೆಗೂ ಇದಕ್ಕೊಂದು ರೂಪ ಕೊಟ್ಟು ಪೋಸ್ಟ್ ಮಾಡುತ್ತಿರುವೆ!)

ಬೆರಗು ನೆನಪಿನಲಿ

ನನ್ನ ಆಫೀಸಿನ ಕಿಟಕಿಯೊಳಗಿಂದ ಕಾಣಿಸುವ ಮಿಲ್ಪಿಟಾಸಿನ ಈ ಬೆಟ್ಟದ ಚಿತ್ರಗಳನ್ನ ಬಹಳಷ್ಟು ಬಾರಿ ನನ್ನ ಫೋನ್ ಕ್ಯಾಮರಾದಲ್ಲಿ ತೆಗೆದಿರುವೆ. ಪ್ರತೀ ಬಾರಿಯೂ ಅಲ್ಲಿ ಕಣ್ಣ ಮುಂದೆ ಹರಡಿಕೊಂಡಿರುವ ಬೆಟ್ಟದ ಭವ್ಯತೆಯನ್ನ ನಾ ತೆಗೆದ ಚಿತ್ರಗಳಲ್ಲಿ ಕಾಣದೆ ಹೋಗಿದ್ದೇನೆ. ತೆಗೆದ ಚಿತ್ರಗಳು ನೆನಪನ್ನು ಮೀಟಿದರೂ ಸಾಕು ಆ ಭವ್ಯತೆಯ ಅನುಭವ ಸಿಗಬಹುದು ಅಂತ ಸಮಾಧಾನ ಮಾಡಿಕೊಳ್ಳುತ್ತೇನೆ.

ಮಳೆಯಿರಲಿ ಚಳಿಯಿರಲಿ ಬಿರುಗಾಳಿ ಬೀಸಿರಲಿ
ಬೆಳ್ ಮೋಡಗಳು ಚುಂಬಿಸಲಿ ಕಾರ್ಮೋಡ
ಗಳ ನೆರಳಿರಲಿ ಸಂಜೆ ರವಿ ರಂಗೇರಿಸಿರಲಿ
ಸಲೆ ಬಿಸಿಲಿರಲಿ ತಿಂಗಳಾ ಬೆಳಕಿರಲಿ

ತಾಳುವುದು ಬಾಳುವುದು ಅಳುಕದೇ ನಿಲ್ಲುವುದು
ಬೋಳು ಬೆಟ್ಟವಿದು ತೋರಿಸುವ ರೂಪ
ಗಳಿಗೆ ಬೆರಗಾಗಿ ಫೋನೊಳ್ ಸೆರೆ ಹಿಡಿದ ಚಿತ್ರ
ಗಳಲಿ ಬೆಟ್ಟವಿದೆ ಬೆರಗು ನೆನಪಿನಲಿ

 

This slideshow requires JavaScript.

ಅವತಾರ್

ಜಾಗರಸ್ವಪ್ನಂಗಳೊಳು ವರ
ಭೋಗಿಶಯನ ಬಹುಪ್ರಕಾರ ವಿ
ಭಾಗಗೈಸಿ ನಿರಂಶಜೀವರ ಚಿಚ್ಛರೀರವನು
ಭೋಗವಿತ್ತು ಸುಷುಪ್ತಿಕಾಲದಿ
ಸಾಗರವ ನದಿ ಕೂಡುವಂತೆ ವಿ
ಯೋಗರಹಿತನು ಅಂಶಗಳ ಏಕತ್ರವೈದಿಸುವ
                                            – ಹರಿಕಥಾಮೃತಸಾರ – ೩-೮

ಜೇಮ್ಸ್ ಕ್ಯಾಮರೂನನ ಅವತಾರ್ ಸಿನೇಮಾ ಇವತ್ತು ನೋಡಿದ್ದಾಯ್ತು, ಅದೂ ಆಕಸ್ಮಿಕವಾಗಿ. ೩ಡಿ ಸ್ಕ್ರೀನಿನಲ್ಲಿ ನೋಡಿ ಆನಂದಿಸಲಿಕ್ಕೆ ಆಗಿರಲಿಲ್ಲ. ಯಾಕೆ ನೋಡಲಿಲ್ಲ ಅವಾಗ ಅಂತನಿಸಿತು. ಮನುಷ್ಯರು ಒಂದು ಕಡೆ ವಿಶೇಷ ಪೆಟ್ಟಿಗೆಯಲ್ಲಿ ಮಲಗಿ ಇನ್ನೊಂದು ಕಡೆ ಅವತರಿಸುವದು, ಇಲ್ಲಿ ಎದ್ದಾಗ ಅಲ್ಲಿ ಮಲಗುವದು, ಅಲ್ಲಿ ಮಲಗಿದಾಗ ಇಲ್ಲಿ ಏಳುವದು ಎಲ್ಲ ನೋಡುತ್ತಿದ್ದಾಗ ಜಗನ್ನಾಥದಾಸರ ಹರಿಕಥಾಮೃತಸಾರದ ಈ ನುಡಿ ನೆನಪಾಯ್ತು.

ಅಕ್ಟೋಬರ್ ೧೦, ಅಗ್ನಿಕಾರ್ಯ, ಸ್ವರ್ಣಸೇತು…

೨೦೦೫ರಲ್ಲಿ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ವಾರ್ಷಿಕ ಸಂಚಿಕೆ ಸ್ವರ್ಣಸೇತುವಿನ ಸಂಪಾದಕ ಮಂಡಲಿಯನ್ನು ಸೇರಿಕೊಂಡ ಹೊಸತಿನಲ್ಲಿ ಸಂಪಾದಕ ಮಂಡಲಿಯ ಸದಸ್ಯರೆಲ್ಲ ಸೇರಿಕೊಂಡು ಬರುವ ಬರಹಗಳನ್ನು ತಿದ್ದಲು ಕೆಲವೊಂದು guidelines ಹಾಕಿಕೊಂಡೆವು. ಬರಹದಲ್ಲಿ ಟೈಪ್ ಆಗಿ ಬರುವ ಬರಹಗಳಲ್ಲಿ ಎಲ್ಲಿಯಾದರೂ ಟೈಪಿಂಗ್ ತಪ್ಪುಗಳಿದ್ದರೆ ತಿದ್ದುವದು, ವಾಕ್ಯ/ಶಬ್ದಗಳ ಉಪಯೋಗ ಸರಿ ಇಲ್ಲ ಅನಿಸಿದರೆ ಅದರ ಬಗ್ಗೆ ಲೇಖಕರಿಗೆ ತಿಳಿಸುವದು ಮತ್ತು ಮಾಡಬಹುದಾದ ಬದಲಾವಣೆಯನ್ನೂ ತಿಳಿಸುವದು, ಹಾಗೇ ಬಂದ ಕತೆಗಳಲ್ಲಿ ಪಾತ್ರಗಳ ಪರಿಚಯ ಸರಿಯಾಗಿ ಆಗುತ್ತಿಲ್ಲ ಅನಿಸಿದರೆ (ಉದಾ: ಯಾವುದೇ ವ್ಯಕ್ತಿಯ ಹೆಸರು ಧಿಡೀರನೆ ಕತೆಯ ಮಧ್ಯದಲ್ಲಿ ಅಸಹಜ ಅನಿಸುವಂತೆ ಬರುವದು, ಇತ್ಯಾದಿ) ಅದನ್ನೂ ಲೇಖಕರ ಗಮನಕ್ಕೆ ತರುವದು, ಇತ್ಯಾದಿ, ಇತ್ಯಾದಿ.

ಅಂಥ ಒಂದು ಕೆಲಸ ಮಾಡುತ್ತಿದ್ದದ್ದು ಮೊದಲ ಬಾರಿಗೆ ಆದ್ದರಿಂದ ಬಹಳ ಹುಮ್ಮಸ್ಸಿನಿಂದ ಕೆಲಸ ಪ್ರಾರಂಭಿಸಿದ್ದೆ. ನನ್ನ ಪಾಲಿಗೆ ಬಂದ ಲೇಖನಗಳಲ್ಲಿ ಒಂದು ಕತೆಯೂ ಇತ್ತು. ತಾಯಿ ಮಗಳ ಕತೆ ಸೊಗಸಾಗಿತ್ತು. ಕಾಲೇಜಿನ ನಾಟಕವೊಂದರಲ್ಲಿ ಪಾತ್ರ ನಿರ್ವಹಿಸಲು ಹೋಗುವ ಮಗಳ ಪಾತ್ರದೊಡನೆ ಶುರುವಾಗುವ ಕತೆ ಅದು. ತಾಯಿ ತನ್ನ ಕಾಲೇಜು ದಿನಗಳಲ್ಲಿ ಅದೇ ನಾಟಕದಲ್ಲಿ ತಾನು ನಾಯಕಿಯಾಗಿ ಅಭಿನಯಿಸಿದಾಗಿನಿಂದ ಆರಂಭಿಸಿ ಅನುಭವಿಸಿದ ಸಿಹಿ-ಕಹಿ ಘಟನೆಗಳ ಫ್ಲ್ಯಾಷ್ ಬ್ಯಾಕಿಗೆ ಹೋಗುತ್ತಿತ್ತು. ಅಂದಿನ ದಿನಗಳಲ್ಲಿ ಆ ನಾಟಕದಲ್ಲಿ ನಾಯಕನ ಪಾತ್ರ ವಹಿಸಿದ ತನ್ನ ಸಹಪಾಠಿಯನ್ನು ಪ್ರೀತಿಸುತ್ತಾಳೆ. ಅವನೂ ಅವಳನ್ನು ಪ್ರೀತಿಸುತ್ತಾನೆ. ಇಬ್ಬರ ಮನೆಯಲ್ಲೂ ಅವರ ಪ್ರೀತಿಗೆ ಬೆಲೆ ಸಿಗದ ಕಾರಣ ಎಲ್ಲರನ್ನೂ ಧಿಕ್ಕರಿಸಿ ತಮ್ಮದೇ ಮನೆ ಮಾಡಿಕೊಂಡು ಸಂಸಾರವಂದಿಗರಾಗುತ್ತಾರೆ, ಮದುವೆಯ ಹಂಗೂ ಇಲ್ಲದೇ. ಹೀಗೆ ಸಾಗುವ ಕತೆ ಮುಂದೆ ಅವಳ ಬಾಳಿನಲ್ಲಿ ಬರುವ ಬಿರುಗಾಳಿಯನ್ನೂ, ಅವಳು ಅದನ್ನು ಎದುರಿಸಿ ನಿಲ್ಲುವ ಪರಿಯನ್ನೂ ಸಮರ್ಥವಾಗಿ ಹೇಳುತ್ತ ಅವಳ ಗಟ್ಟಿಯಾದ ವ್ಯಕ್ತಿತ್ವದ ಚಿತ್ರಣ ಕೊಡುವ ಕತೆ ಗತಕಾಲದಲ್ಲೇ ಕೊನೆಗೊಳ್ಳುತ್ತಿತ್ತು. ಕತೆ ಓದಿದ ಮೇಲೆ ಬಹಳ ಒಳ್ಳೆ ಕತೆ ಅನಿಸಿದರೂ ಅದು ಗತಕಾಲದಲ್ಲೇ ಕೊನೆಗೊಳ್ಳದೆ ಮತ್ತೆ ವರ್ತಮಾನಕ್ಕೆ ಬಂದು ಮುಗಿದರೆ ಒಳ್ಳೆಯದಲ್ಲವೇ ಅಂತ ಅನಿಸಿತು. ಅದೇ ಅನಿಸಿಕೆಯನ್ನು ಇತರ ಸಂಪಾದಕರಲ್ಲೂ ಹಂಚಿಕೊಂಡಾಗ ಅವರೂ ಆಗಬಹುದೆಂದರು. ಆ ಕತೆಯ ಕತೆಗಾರ್ತಿಗೂ ಅದು ಒಪ್ಪಿಗೆಯಾಗಿ ಅವರು ಕತೆಯ ಅಂತ್ಯ ವರ್ತಮಾನದಲ್ಲೇ ಆಗುವಂತೆ ಬದಲಾಯಿಸಿ ಕಳಿಸಿದರು, ಅದೇ ಸ್ವರ್ಣಸೇತುವಿನಲ್ಲಿ ಪ್ರಕಟವೂ ಆಯಿತು. ಎಲ್ಲರೂ ಅದನ್ನು ಒಪ್ಪಿಕೊಂಡದ್ದು ನನಗೆ ಬಹಳ ಖುಷಿ ಕೊಟ್ಟಿತ್ತು, ಏನನ್ನೋ ಸಾಧಿಸಿದ ಭಾವನೆಯನ್ನೂ ಕೊಟ್ಟಿತ್ತು.

ಆ ಭಾವನೇ ಹಾಗೆ ಉಳಿದುಬಿಡುತ್ತಿತ್ತು, ಶ್ರೀನಿವಾಸ ವೈದ್ಯರ ‘ಅಗ್ನಿಕಾರ್ಯ’ ದ ಮಾಯಕ್ಕನ ಕತೆಯನ್ನು ಓದಿರದೇ ಇದ್ದರೆ! ರೈಲ್ವೇ ರಿಸರ್ವೇಶನ್ ಕೌಂಟರಿನ ಸಾಲಿನಲ್ಲಿ ಸಿಡುಕು ಗಂಡನೊಡನೆ ಕುಳಿತಿದ್ದ ಸೌಮ್ಯ ಹೆಣ್ಣುಮಗಳನ್ನು ಕಂಡಾಗ ಕತೆಗಾರನಿಗೆ ತನ್ನ ಮಾಯಕ್ಕನ ನೆನಪಾಗುತ್ತದೆ. ಮಾಯಕ್ಕನ ನೆನಪಿನಲ್ಲಿ ಹಿಂದೆ ಹೋದ ಕತೆಗಾರ ಮತ್ತೆ ರಿಸರ್ವೇಶನ್ ಕೌಂಟರಿನ ಸಾಲಿಗೆ ಮರಳಿದಾಗ ಆ ಹೆಣ್ಣುಮಗಳು ಮಾಯಕ್ಕಳೇ ಆಗುತ್ತಾಳೆ. ಅವಳ ಗಂಡ ಹಿಟ್ಲರನಂತೆ ಕಾಣುತ್ತಾನೆ. ಆ ಹಿಟ್ಲರನನ್ನ, ಅವನ ಸಿಡುಕನ್ನ, ಅವನೊಡನೆ ಇವಳು ನಡೆದುಕೊಳ್ಳುವ ಪರಿಯನ್ನೂ ನೋಡುವ ಕತೆಗಾರ ಈ ಮಾಯಕ್ಕನ ಈ ಕ್ಷಣದ ಘಟನೆಗಳ ಜೊತೆ ಜೊತೆಯಲ್ಲಿ ತನ್ನ ಮಾಯಕ್ಕನ ಬದುಕಿನ ಘಟನೆಗಳನ್ನೂ ಕಾಣತೊಡಗುತ್ತಾನೆ. ಬಹಳ ಸಲೀಸಾಗಿ ಅಂದಿಗೆ ಇಂದಿಗೆ ಹೋಗುತ್ತಾ, ಬರುತ್ತಾ ಭೂತಕಾಲದ ಕತೆ ಇಲ್ಲೆ ಮತ್ತೊಮ್ಮೆ ನಡೆಯುತ್ತಿದೇನೋ ಅನಿಸುವಂತೆ ಹೇಳುತ್ತಾನೆ. ಕತೆಯ ಕೊನೆಯಲ್ಲಿ ಭೂತಕಾಲದಿಂದ ವರ್ತಮಾನಕ್ಕೆ ಮರಳದೆ ಓದುಗರನ್ನ ನಿರ್ದಾಕ್ಷಿಣ್ಯವಾಗಿ ಅಲ್ಲೇ ಬಿಟ್ಟು ಬಿಡುತ್ತಾನೆ (ಅಥವಾ ತಾನೇ ಅಲ್ಲೇ ಉಳಿದು ಬಿಡುತ್ತಾನೆ ಎಂದರೆ ಹೆಚ್ಚು ಸಮಂಜಸವೇನೋ!). ನಿಜವಾಗಿಯೂ ಅದ್ಭುತ ನಿರೂಪಣೆ ಶ್ರೀನಿವಾಸ ವೈದ್ಯರದ್ದು. ಅದನ್ನು ಓದುತ್ತಿದ್ದಂತೆಯೇ ಸ್ವರ್ಣಸೇತುವಿನ ಕತೆಯ ಕೊನೆಯ ಬಗ್ಗೆ ತಪ್ಪು ಮಾಡಿಬಿಟ್ಟೆ ಅನಿಸಿಬಿಟ್ಟಿತು. ಆ ಕತೆಯೂ ವರ್ತಮಾನಕ್ಕೆ ಬರದೇ ಭೂತಕಾಲದಲ್ಲೇ ಮುಗಿಯುವದೇ ಸರಿಯಾಗಿತ್ತು ಅನಿಸಿಬಿಟ್ಟಿತು. ಕತೆಗಾರ್ತಿಯಾದರೂ ಕತೆಯನ್ನು ಹೇಳುತ್ತ ತಾವೂ ಅಲ್ಲೇ ನಿಂತುಬಿಟ್ಟಿದ್ದರೇನೋ, ಅದೇ ಕಾರಣಕ್ಕೇ ಕತೆಯ ಅಂತ್ಯ ಅಲ್ಲಿಗೇ ಆಗುವದೇ ಸರಿ ಅನಿಸಿತು.

ಅನಿಸಿದ್ದನ್ನ ಬರೆದು ಕಳುಹಿಸಬೇಕು, ಬ್ಲಾಗಿನಲ್ಲಾದರೂ ಹಾಕಬೇಕು ಎನ್ನುವ ಹಂಬಲ ಹಲವು ದಿವಸಗಳಿಂದ ಮನದಲ್ಲಿದ್ದರೂ ಮಾಡಲಾಗಿರಲಿಲ್ಲ, ಹೆಚ್ಚು ಕಡಿಮೆ ಮರೆತೇ ಹೋಗಿತ್ತು. ಪೂರ್ಣಿಮಾ ರಾಮಪ್ರಸಾದರ “ಅಕ್ಟೋಬರ್ ೧೦” ಕಥಾ ಸಂಕಲನದಲ್ಲಿ ಅವರ ಮುನ್ನುಡಿಯನ್ನು ಓದುವಾಗ ಇದೆಲ್ಲ ಮತ್ತೆ ನೆನಪಾಯಿತು. ೨೦೦೫ ಸಂಪಾದಕ ಸಮೀತಿಯಲ್ಲಿ ಜೊತೆಯಲ್ಲಿ ಕೆಲಸ ಮಾಡಿದ್ದೆವು. ‘ನೀವೇ ಲೇಖನಗಳನ್ನು ಬರೆಯದೆ ಇನ್ನೊಬ್ಬರ ಲೇಖನವನ್ನು ಹೇಗೆ ತಿದ್ದುವಿರಿ?’ ಎಂದು ಹರಿಹರೇಶ್ವರರು ಕೇಳಿದ್ದು ಇನ್ನೂ ನೆನಪಿನಲ್ಲಿದೆ. ಪೂರ್ಣಿಮಾ ಅವರು ಕತೆ ಬರೆಯಲು ಆರಂಭಿಸಿದ್ದು ಆವಾಗಲೇ ಎಂದು ಇಲ್ಲಿಯವರೆಗೂ ಗೊತ್ತಿರಲಿಲ್ಲ. ಅಂದಿನ ಸ್ವರ್ಣಸೇತು ಸಂಚಿಕೆಯಲ್ಲೇ ಅವರ ಎರಡು ಸೊಗಸಾದ ಕತೆಗಳಿದ್ದವು. ಓದುಗರೇ ಪೂರ್ಣ ಮಾಡಲಿ ಎಂದು ಅವರು ಕೊಟ್ಟ ಒಂದು ಅಪೂರ್ಣ ಕತೆಯೂ ಒಂದಾಗಿತ್ತು ಅದರಲ್ಲಿ. ಆ ಕತೆಗೆ ಸೊಗಸಾದ ಅಂತ್ಯಗಳೂ ಬಂದಿದ್ದವು. ಅದೇ ದಿನಗಳಲ್ಲೇ ಅವರು ಬರೆದ ಭೂತದ ಕತೆಯನ್ನು thatskannada.com ನಲ್ಲಿ ಓದಿದ ನೆನಪು. ಅಲ್ಲಿಂದ ಆರಂಭಿಸಿ ಪೂರ್ಣಿಮಾ ಅವರು ಇವತ್ತು ಕಥಾಸಂಕಲನವನ್ನು ಹೊರತಂದಿದ್ದು ನೋಡಿ ಖುಷಿಯಾಯಿತು. ಅಕ್ಟೋಬರ್ ೧೦ ಸಂಕಲನದಲ್ಲಿನ ಹಲವಾರು ಕತೆಗಳನ್ನು ಮೊದಲೇ ಓದಿದ್ದರೂ, ಮತ್ತೊಮ್ಮೆ ಒಂದೇ ಕಡೆ ಓದಿದ್ದು, ಅವುಗಳಲ್ಲೆಲ್ಲ ಪೋಣಿಸಿಕೊಂಡಿರುವ ಮನೋವೈಜ್ಞಾನಿಕ ವಿಚಾರಧಾರೆ, ಜೀವನಪ್ರೀತಿ ಸಂತೋಷ ಕೊಟ್ಟಿತು. ಮುನ್ನುಡಿಯಲ್ಲಿ ಅವರೇ ಹೇಳಿಕೊಳ್ಳುವಂತೆ ಕತೆಗಳು ಆಶಾಭಾವನೆಯ ಕಡೆಯೇ ವಾಲುತ್ತವೆ. ಜೀವನದಲ್ಲಿ ಸೋಲು ಎನ್ನುವದೊಂದು ಇದೆ ಎನ್ನುವದನ್ನು ಒಪ್ಪಲು ತಾವು ಸಿದ್ಧರಿಲ್ಲದ್ದರಿಂದ ಅದು ಹಾಗಾಗಿರಬಹುದು ಎನ್ನುತ್ತಾರೆ. ಅದು ಅವರ attitude ಅನ್ನ ತೋರಿಸುತ್ತದೆ. ಕಷ್ಟಗಳು ಬಂದಾಗ ಅವುಗಳನ್ನು ಎದುರಿಸಲು ಸರಿಯಾದ attitude ಬಹಳ ಮುಖ್ಯ ಎನ್ನುವದನ್ನೇ ಅವರ ಕತೆಗಳ ಪಾತ್ರಗಳೂ ತೋರಿಸುತ್ತವೆ.

ಮಂದಾರ ಪುಸ್ತಕ ಪ್ರಕಟಿಸಿದ ಅಕ್ಟೋಬರ್ ೧೦ ಕಥಾಸಂಕಲನದ ಮುದ್ರಣವೂ ಅಚ್ಚುಕಟ್ಟಾಗಿ ಬಂದಿದೆ. ಯಾಕೊ ಮುದ್ರಾರಾಕ್ಷಸ ಒಂದಷ್ಟು ಕಡೆ ಕೈಯಾಡಿಸಿದ್ದಾನೆ, ಅಕ್ಟೋಬರ್ ೧೦ ಕತೆಯಲ್ಲಿ ಬರುವ ಮನೋವೈಜ್ಞಾನಿಕ ಸ್ಥಿತಿಯ ವೈದ್ಯಕೀಯ ಹೆಸರನ್ನೇ ಮುದ್ರಾರಾಕ್ಷಸ ತಿಂದುಬಿಟ್ಟಿದ್ದಾನೆ ಎನ್ನುವದೊಂದು ಸ್ವಲ್ಪ ದೊಡ್ಡದಾಗಿ ಕಾಣಿಸಿತು. ಮಂಸೋರೆ ಅವರ ಚಿತ್ರಗಳು ಸೊಗಸಾಗಿವೆ, ಕತೆಗಳಿಗೆ ಪೂರಕವಾಗಿವೆ. ಇನ್ನಷ್ಟು ಕತೆಗಳು ಬರಲಿ ಪೂರ್ಣಿಮಾ ಅವರಿಂದ.

(ಇದನ್ನು ಬರೆದಿಟ್ಟು ೨-೩ ವಾರವೇ ಆಯಿತು. ಫೋಟೋಗಳನ್ನೂ ಹಾಕಬೇಕು ಅಂತ ಪೋಸ್ಟ್ ಮಾಡಿರಲಿಲ್ಲ. ಅಂತೂ ಅಕ್ಟೋಬರ್ ೧೦ಕ್ಕೇ ಪೋಸ್ಟ್ ಮಾಡಿದ್ದಾಯ್ತು!)

(ಶ್ರೀನಿವಾಸ ವೈದ್ಯರ ‘ಅಗ್ನಿಕಾರ್ಯ’ದ ಬಗ್ಗೆ ಓದುವ ಹವ್ಯಾಸದಲ್ಲೊಂದು ಒಳ್ಳೆ ಲೇಖನವಿದೆ. ನನ್ನ ಬರಹಕ್ಕೆ ಅಗ್ನಿಕಾರ್ಯದ ಚಿತ್ರವನ್ನೂ ಅಲ್ಲಿಂದಲೇ ಎರವಲು ಪಡೆದಿರುವೆ. ಚಿತ್ರಕ್ಕಾಗಿ ನರೇಂದ್ರ ಪೈ ಅವರಿಗೆ ಧನ್ಯವಾದಗಳು)

ಹೀಗೊಂದು ರವಿವಾರದ ಮಾತು

ಸುಮತೀಂದ್ರ ನಾಡಿಗರ ’ಒಂದು ಹೊಡ್ತ ಎರಡು ತುಂಡು’ ತರಹದ ನೇರ ಮಾತು, ಭುವನೇಶ್ವರಿ ಹೆಗಡೆಯವರ ನಗೆಗಡಲ ಅಲೆಯುಕ್ಕಿಸಿದ ಮಾತು (ನಗು ನಗುತ್ತಲೇ ಏಕಾಂತ ಮತ್ತು ಏಕಾಂಗಿತನದ ಎಳೆ ಬಿಡಿಸಿಟ್ಟದ್ದೂ ಹೌದು), ಬರವಣಿಗೆಯಲ್ಲಿ ಪ್ರಾದೇಶಿಕ ಕನ್ನಡದ ಬಳಕೆಯ ಕುರಿತು ಒಂದು ಛೊಲೋ ಪ್ರಬಂಧವನ್ನ ಭಡ ಭಡ ಓದಿದರೂ ಅದರಲ್ಲಿ ಬಳಸಿದ ಪ್ರಾದೇಶಿಕ ಕನ್ನಡವನ್ನ ಆಯಾ ಊರಿನವರಂತೆಯೇ ನುಡಿದ ಶಾಂತಲಾ ಭಂಡಿಯವರ ಮಾತು, ಕನ್ನಡ ನಾಡಿನಿಂದ ದೂರ ಬೆಳೆಯುವ ಕನ್ನಡದ ಮಕ್ಕಳ ಮಕ್ಕಳ ಮನದಲ್ಲಿ, ಬಾಯಲ್ಲಿ ಕನ್ನಡಕ್ಕೂ ಒಂಚೂರು ಜಾಗ ದೊರಕಿಸಿಕೊಡುವದು ಹೇಗೆ ಎನ್ನುವದನ್ನ ಬಿಡಿಸಿಟ್ಟ ಮೀರಾ ಅವರ ಮಾತು, ಅದೇ ಮೀರಾ ಅವರು ಸಂಪಾದಿಸಿದ ’ಗುಬ್ಬಿ ಗೂಡು’ ಪುಸ್ತಕ ಅವೇ ಹೊರನಾಡ ಕನ್ನಡಿಗರ ಮಕ್ಕಳನ್ನು ಕನ್ನಡ ಓದಿನ ಕಡೆಗೆ ಹೇಗೆ ಸೆಳೆಯಬಲ್ಲದು ಎಂದು ಹೇಳಿದ ಡಾ. ಗುರುಪ್ರಸಾದ್ ಕಾಗಿನೆಲೆಯವರ ಮಾತು, ’ಕನ್ನಡ ಕಲಿ’ ಮಕ್ಕಳ ಆಕರ್ಷಕ ಕಾರ್ಯಕ್ರಮಗಳು, ಹಾಗೂ ಗೆಳೆಯರೊಂದಿಗೆ ಕುಳಿತು ಹೋಳಿಗೆ ಊಟದೊಡನೆ ಹರಟಿದ ನಮ್ಮದೇ ಮಾತು, ಕನ್ನಡ ಸಾಹಿತ್ಯ ರಂಗದ ವಸಂತ ಸಾಹಿತ್ಯೋತ್ಸವದಲ್ಲಿ ಕಳೆದ ಆದಿತ್ಯವಾರದ ಮಾತಿದು!

ಮುಂಚೆ ಎಲ್ಲೋ ಭೆಟ್ಟಿಯಾಗಿದ್ದೇವೆಲ್ಲವೇ ಎನ್ನುತ್ತ ಮಾತನಾಡಿಸಿದ ಮೈಶ್ರೀ ನಟರಾಜರೊಡನೆ, ಸಾಹಿತ್ಯ ಗೋಷ್ಠಿಯಲ್ಲಿ ಭೆಟ್ಟಿಯಾಗಿದ್ದ ಎಮ್ ಆರ್ ದತ್ತಾತ್ರಿ ಅವರೊಡನೆ, ಹಾಗೇ ಶ್ರೀವತ್ಸ ಜೋಷಿ ಅವರೊಡನೆ ಒಂದಷ್ಟು ಮಾತು, ಗುರುಪ್ರಸಾದ ಕಾಗಿನೆಲೆಯವರೊಡನೆ ’ಬಿಳಿಯ ಚಾದರ’ ಪುಸ್ತಕದ ಕುರಿತೊಂದೆರಡು ಮಾತು, ಹಾಗೇ ಅವರ ಬಿಳಿಯ ಚಾದರ ಹಾಗೂ ಶಕುತಂಳಾ ನನಗಿಲ್ಲಿ ಸ್ಯಾನ್ ಹೋಸೆ ಲೈಬ್ರರಿಯಲ್ಲಿ ಸಿಕ್ಕಿದ್ದವು ಎಂದು ಹೇಳಿದಾಗ ಅವರಿಗಾದ ಆಶ್ಚರ್ಯ, ತುಳಸೀವನದ ತ್ರಿವೇಣಿಯವರ ಭೆಟ್ಟಿ ಹಾಗೂ ಅವರು ಭಕ್ರಿಯ ಬಗೆಗಿನ ನನ್ನ ಹಳೇ ಬ್ಲಾಗ್ ಬರಹವನ್ನ ನೆನಪಿಸಿಕೊಂಡದ್ದು, ಊಟದ ಹೊತ್ತಿನಲ್ಲಿ ವಾಕ್ಪಟುಗಳ ಬಗ್ಗೆ, ಸಾಹಿತ್ಯ ಗೋಷ್ಠಿಯ ಬಗ್ಗೆ ಒಂದಷ್ಟು ಮಾತು, ಬಹಳ ದಿನಗಳ ಮೇಲೆ ಭೆಟ್ಟಿಯಾದ ಮಿತ್ರರೊಡನೆ ಒಂದಷ್ಟು ಉಭಯ ಕುಶಲೋಪರಿ.

ಭುವನೇಶ್ವರಿ ಹೆಗಡೆ ಅವರ ಸಹಜ, ಸರಳ ಮಾತು ಇಷ್ಟವಾಯಿತು. ಇಲ್ಲಿಯವರೆಗೆ ಅವರ ಸಾಹಿತ್ಯವನ್ನು ಹೆಚ್ಚಾಗಿ ಓದಿಲ್ಲ. “ನಿಮ್ಮ ಲೇಖನಗಳನ್ನು ಓದಿಲ್ಲ, ಆದರೆ ನಿಮ್ಮ ಮಾತು ಕೇಳಿ ಓದಬೇಕು ಅನಿಸಿದ್ದರಿಂದ ಈ ಪುಸ್ತಕ ಕೊಂಡೆ (ಬೆಸ್ಟ್ ಆಫ್ ಭುವನೇಶ್ವರಿ ಹೆಗಡೆ) ಇದರಲ್ಲಿ ನಿಮ್ಮ ಹಸ್ತಾಕ್ಷರ ಬೇಕು” ಎಂದು ಅವರಿಗೆ ಹೇಳುವಾಗ ಒಂದಷ್ಟು ಮುಜುಗರವಾಯ್ತು. ಆದರೆ ಅವರು ಪ್ರೀತಿಯಿಂದ ಹಸ್ತಾಕ್ಷರ ಹಾಕಿ ಕೊಟ್ಟರು :) .

’ಕ್ಯಾ ಕಹೂ ಕೆ ಶರ್ಮ್ ಸೆ ಹೈ ಲಬ್ ಸಿಲೇ ಹುವೆ’ ಅನ್ನುವಲ್ಲಿ ಹಿನ್ನೆಲೆ ಸಂಗೀತವೇ ಇಲ್ಲದೇ ಬರೀ ಅಲ್ಲಿರುವ ಹಾಡು ಕೊಡುವ ಪರಿಣಾಮ, ಅದೇ ರೀತಿ ’ದೇಖೊ ಜೀ ತುಮ್ಹಾರೆ ಯಹಿ ಬತಿಯಾ ಮನಕೋ ಹೈ ತರಸಾತೀ’ ಎನ್ನುವಲ್ಲಿಯೂ ಉಂಟಾಗುವ ಅದೇ ರೀತಿಯ ಪರಿಣಾಮ ಯಾಕೊ ಒಂದೆರಡು ದಿವಸಗಳಿಂದ ಮನಸ್ಸಿನಲ್ಲಿ ಬರುತ್ತಿದ್ದವು. ಸುಮತೀಂದ್ರ ನಾಡಿಗರ ’ಮೂರು ಸಾಹಿತ್ಯ ಚರಿತ್ರೆ’ಗಳು ಪುಸ್ತಕವನ್ನ ಮನೆಗೆ ತಂದು ಅದರ ಪರಿವಿಡಿ ಕಣ್ಣು ಹಾಯಿಸಿದಾಗ ಕಂಡ ’ಎಸ್. ಆರ್. ಎಕ್ಕುಂಡಿ’ ಲೇಖನವನ್ನು ಮೊದಲು ಓದಲು ತೊಡಗಿದಾಗ ಅದರಲ್ಲಿನ ಸಾಲು, ’ಎಲ್ಲಿ ಮಾತುಗಳು ಕೇಳಬೇಕೋ ಅಲ್ಲಿ ಗುರುರಾಜ ಮಾರ್ಪಳ್ಳಿ ವಾದ್ಯಗಳನ್ನು ತೆಪ್ಪಗಿರಿಸಿ, ಕವಿತೆಯ ಸಾಲುಗಳನ್ನು ಉಚ್ಚರಿಸುತ್ತಿದ್ದರು’ ಓದಿದಾಗ ಎಲ್ಲಿಂದೆಲ್ಲಿಗೆ ಚುಕ್ಕಿಗಳ ಜೋಡಣೆ ಅನಿಸಿದ್ದು ಸುಳ್ಳಲ್ಲ. ಮೂರು ಸಾಹಿತ್ಯ ಚರಿತ್ರೆಗಳು ಕೈಯಲ್ಲಿ ಹಿಡಿದುಕೊಂಡು ಸುಮತೀಂದ್ರ ನಾಡಿಗರ ಹಸ್ತಾಕ್ಷರ ಕೇಳಲಿಕ್ಕೆ ಹೋದಾಗ ಅದರಲ್ಲಿನ ಅನಂತ ಮೂರ್ತಿಯವರ ’ದಿವ್ಯ’ದ ಬಗೆಗಿನ ಲೇಖನವನ್ನು ವಿಶೇಷವಾಗಿ ಅವರು ಉಲ್ಲೇಖಿಸಿದ್ದು ಯಾಕೋ ತಿಳಿಯಲಿಲ್ಲ. ಸುಮತೀಂದ್ರ ನಾಡಿಗರನ್ನೂ ನಾನು ಓದಿಕೊಂಡಿಲ್ಲ, ನಿಜ ಹೇಳಬೇಕೆಂದರೆ ಅವರ ಕುರಿತು ಹೆಚ್ಚಾಗಿ ಕೇಳಿದ್ದು ’ಆವರಣ’ದ ವಿವಾದದ ದಿನಗಳಲ್ಲಿ. ಹೀಗಾಗೀ ’ದಿವ್ಯ’ದ ಉಲ್ಲೇಖದಲ್ಲೂ ಕನೆಕ್ಟ್ ಮಾಡಲೊಂದು ಡಾಟಿತ್ತೆ ಎನ್ನುವ ಅನುಮಾನ ಉಳಿದಿದೆ. ಕಡೆಯದಾಗಿ ನಾಡಗೀತೆಯು ನುಡಿಯುತ್ತಿದ್ದಂತೆ ಕೈ ತಾಳ ಹಾಕುತ್ತಿತ್ತು, ಬಾಯಿ ನುಡಿಯುತ್ತಿತ್ತು ಆದರೆ ತಲೆಯಲ್ಲಿ ನಾಡಗೀತೆಯ ವಿವಾದ ಇಣುಕುತ್ತಿತ್ತು. ಇವತ್ತು ಎಲ್ಲೋ ಓದಿದೆ ನಾಡಗೀತೆಯ ಬಗ್ಗೆ ಪಾಪು ಏನೋ ಇನ್ನೊಂದು ಹೇಳಿಕೆ ಕೊಟ್ಟಿದ್ದಾರೆ. ಹ್ಮ್.. ಕಾಕತಾಳಿಯಗಳ ಕಂತೆ :)

ಸುಮತೀಂದ್ರ ನಾಡಿಗರ ಹಾಗೂ ಭುವನೇಶ್ವರಿ ಹೆಗಡೆ ಅವರ ಪುಸ್ತಕಗಳ ಮೇಲೆ ಅವರವರ ಸಹಿ ಪಡೆದಂತೆ ದತ್ತಾತ್ರಿ ಮತ್ತು ಗುರುಪ್ರಸಾದರ ಸಹಿ ಯಾಕೆ ಪಡೆಯಲಿಲ್ಲ ಎನ್ನುವ ಮನದ ಮಾತು ಮಾತ್ರ ಕಾಡಿತು. ಮನಸ್ಸಿನ ವ್ಯಾಪಾರ, ಅರಿವಿಲ್ಲದೇ ನಡೆಯುತ್ತದೆ, ಅವಲೋಕಿಸಿದಾಗ ಆಶ್ಚರ್ಯಪಡಿಸುತ್ತದೆ, ಪಾಠ ಕಲಿಸುತ್ತದೆ.

ಇರಲಿ, ಈಗ ಓದಲಿಕ್ಕೊಂದಷ್ಟು ಹೊಸ ಪುಸ್ತಕಗಳು ಸಿಕ್ಕಿವೆ, ನಿಧಾನವಾಗಿ ಸಮಯ ಮಾಡಿಕೊಂಡು ಓದಬೇಕು.

(ಚಿತ್ರಗಳು: ನನ್ನ ಕಾಪ್ಟಿವೇಟಿನಲ್ಲಿ ನಾನೇ ತೆಗೆದವು)

Inspired by a Movie?

I was at the local library’s dvd section yesterday, looking for a good movie to watch. Wanted something new, engaging and inspirational. Didn’t want anything negative or dark, didn’t even want any heist movies. Have watched a bunch of those before and liked them too, but I didn’t feel like picking any of those. Mind was still racing, trying to define the type of movie I wanted to watch. Positive, uplifting, engaging, celebrating the human spirt and endeavor were the key words running through my mind. Then suddenly I said, “I want to watch a movie that is opposite of Omkara.” Funny it seems but that made sense. I wanted the same sort of engaging, tight, no nonsense movie but not exploring the darker side of the mind with a very very disturbing and tragic ending.

Wanted to pick up a relatively new movie, something that I haven’t seen before. However I have been so out of touch with recent movies that I don’t know any recent movie by name (except of George Clooney’s Up in the Air which is probably a year old. I saw it recently and loved it). So giving up on the ‘new’ tag, started looking for something I had seen before. Thought of some old classics like “The Bridge on the River Kwai”, “Ben Hur”,  and gave them a pass. Finally picked up “Glory Road” and “Pursuit of Happyness”.

Watched “Glory Road” today. What a wonderful movie! Third time around, still held my attention throughout, gave me lump in the throat a couple of times and made me rewind one more time for that last basket. This true story of the all blacks vs all whites NCAA finals of 1966 rocks! Here is that last basket form youtube.

In “Chak De India”, coach Kabir Khan gives an inspirational “sattar minute” speech to the team. That scene was great. I did seem a bit long and dramatic though. While watching it, it had also reminded me of a similar speech from this movie. This one not done in the change room, but on the field during a timeout. Here it is below, watch at the 2 min 57 sec mark.

Every time I re-watch a movie, something different touches me.  The last time I watched it, I had written this about the movie, don’t know if something new occurs to me this time around.

Was struck by two things this time around. One was the elevator scene where Chris Gardner’s (Will Smith) facial expression doesn’t change one bit even after he learns that a fellow intern didn’t answer the essay question in the test. His back is to the wall and he has given his all to this one shot at better future, there is going to be only one winner out of the 20 interns, under such situation he learns at least one other guy didn’t do well. But there is no smile, no extra hope, no elation. The new knowledge doesn’t change any thing in the stampede of emotions reflecting on the face.

While he is spending the nights at shelters with his son, it suddenly occurred to me that I know the ending of this story but at that point in his life, Chris didn’t know. But he was marching on, giving everything, trying every bit hard. That was a revelation and that made his story all the more inspiring.

****************

 

While I’m at it, I thought I’ll list down some of the movies I have watched a few times and don’t mind watching again. Have you seen any of these? What’s your list , please share it here if you don’t mind and help me watch great movies :-) , any kannada movies (I think Chinnari Mutta was something similar, but I watched it long back and don’t remember much of it now)?

(List not in any particular order and its just what comes to my mind now!)

Ben-Hur
The Bridge on the River Kwai
To Kill a Mocking Bird
Searching for Bobby Fischer
October Sky
The Great Debaters
Ghosts of Mississippi
Pursuit of Happyness

The Scent of a Woman also comes to my mind but mostly because of Al Pacino’s speech at the end and his tango with the beautiful Gabrielle Anwar :) .

Incredible?

After all the hoopla of the Oscar has died down, after I forgot almost all the reviews I read about it, finally I watched the movie Slumdog Millionaire. If I were to describe the movie in one word, the word would be “Incredible”, literally mostly and figuratively in some small parts. I think the best part of the movie is the amazing work by Resul Pookutty. I felt I was in the middle of the busy Mumbai street, the slum and all those places in the movie. He brought all that into my living room. Rehman’s music is good but I don’t seem to remember any of it now, including the Jai Ho song. I think he has given much better music in other movies. Story build up and narration is in a good package but didn’t find much of build up. Overall an ok movie I guess. For a movie depicting hope and triumph, I felt the story could have been built up better.

I’m sure kids in India grow up hearing about the child abductions and how the kidnapped children are crippled and pushed into begging, at least I had heard of such stories while growing up. The question of “Darshan Do Bhagavan” and the story associated with how Jamal knows the answer seemed realistic. So did the way Jamal handles the question about “Satyameva Jayate.”  I liked nonlinear narration around the “Colt” revolver question. We are shown Jamal’s brother killing Mamman with a revolver and no one really says colt at that point; Jamal answers the question. In the next seen we see Salim calling himself the man with the colt revolver. That was good.

If those were the good parts, I wonder how much of the screenplay was written from the point of view of the slumdog kid and how much of it was with Danny Boyle’s (or the western audience’s) view point. Amitabh’s Zanjeer must have been many years before Jamal was born. Danny Boyle needs to counter that and some how. So what does he do? Makes young Jamal jump through the shit hole and show us his love for Amitabh. Was that a touch(?) extreme? You bet. What was that blue baby Ram doing in that narrow gully by the way? For Danny Boyle or the western audience it may seem strange for a Muslim boy to know what Ram holds in his hands. Does Boyle think India’s Hindu culture is alien to Indian Muslims? In any case the two question give him good pretext to show case the shit holes of the slum and also the post Babri Masjid demolition events. Whatever helps connect the dots in history and this Muslim boy from slums in Bombay I guess.

After spending some years in Agra, Jamal and Salim return to Mumbai. Describing that Jamal says, when we came back Bombay had become Mumbai. Was the name change that big of an impact in the day to day life of even slum dwellers? Don’t get me wrong, I have read elsewhere that the city had always been “amchi mumbai” for the common man on the street. Is that not right? What was that about the real American way the American tourist talks about? Was that supposed to show how good Americans are or was it an attempt to show that Americans throw money every where? Ek teer do shikar, eh?  In any case it was quite funny to see the way the Merc left by the American tourists gets dismantled systematically (I won’t be surprised if it really happens). Wonder why the Indian driver also went with them to see the dhobi ghat though.

Finally, do they really teach Alexandre Dumas’ “The Three Musketeers” in primary schools in India? I started learning English only from 5th standard so I don’t know :) . That’s another incredible thing I guess. Any way, nothing wrong with that. I liked the way he takes a blind guess and hits the jackpot.  So there was the show of luck playing its role too :) .

It was good to see Rahman, Resul Pookutty and Gulzar being recognized with Oscar.  I loved the Oscar acceptance speech of Resul Pookutty. I had this (in Kannada) to say after listening to the speech at that time.

 

ತೇರಾನೇರಿ ತೇರಾನೇರಿ …

ಶ್ರಾವಣ ಮಾಸ ಕೃಷ್ಣ ಪಕ್ಷದ ದ್ವಿತಿಯಾ ದಿವಸ ಮಂತ್ರಾಲಯ ಪ್ರಭು ಶ್ರೀ ರಾಘವೇಂದ್ರರ ಆರಾಧನೆ. ಇಲ್ಲೆ ಲಿವರ್ಮೋರ್ ಗುಡಿ ಒಳಗ ಎಸ್ವಿಬಿಎಮ್ ಆಯೋಜಿಸಿದ್ದ ಆರಾಧನಾ ಕಾರ್ಯಕ್ರಮಕ್ಕೆ ಹೋಗಿದ್ವಿ. ಅಲ್ಲಿ ರೆಕೊರ್ಡ್ ಮಾಡಿದ ರಥೋತ್ಸವ. ಒಂದಷ್ಟು ಛೋಲೊ ದಾಸರ ಹಾಡಿನ ಭಜನಿ ಮಾಡಿದ್ರು. ನಾನು ಅದನ್ನೊಂದಿಷ್ಟು ರೆಕಾರ್ಡ್ ಮಾಡಿ ಯೂ ಟ್ಯೂಬಿಗೆ ಏರಿಸಿದೆ. ಇಕಾ ಇಲ್ಲೆ ಲಿಂಕ್ ಅವ ನೋಡ್ರಿ.