ಎರಡು ಪದ, ಮೂರು ಪುಸ್ತಕ, ಒಂದಷ್ಟು ಲಿಂಕು, ಪುರಂದರದಾಸರ ಪುಣ್ಯದಿನಕ್ಕೆ…
ದಾಸರ ಪದಗಳ ಭಜನೆಗಳನ್ನ ಕೇಳುವದು ಮತ್ತು ಅವುಗಳಲ್ಲಿ ಭಾಗವಹಿಸುದು ನನಗೆ ಬಹಳ ಇಷ್ಟವಾಗುತ್ತದೆ. ಯಾವಾಗಿನಿಂದ ಇದು ಶುರುವಾಯಿತು ಅನ್ನುವದು ನೆನಪಿನಲ್ಲಿಲ್ಲ, ಆದರೆ ಈ ಅಭಿರುಚಿ ಬೆಳೆಯಲಿಕ್ಕೆ ಚಿಕ್ಕಂದಿನ ರಜಾ ದಿನಗಳಲ್ಲಿ ನಮ್ಮ ಅಮ್ಮನ ತವರೂರು ಕುಕನೂರಿಗೆ ಹೋದಾಗ ಅಲ್ಲಿ ಪ್ರತಿ ಗುರುವಾರ ಸಂಜೆ ನಡಯುತ್ತಿದ್ದ ಭಜನೆ ಬಹಳ ಮುಖ್ಯ ಪಾತ್ರವಹಿಸಿರಬೇಕು ಅನಿಸುತ್ತದೆ. ನಮ್ಮ ಅಜ್ಜಿ ತಾತರ ಮನೆಯಲ್ಲಿ ರಾಯರ (ರಾಘವೇಂದ್ರ ಸ್ವಾಮಿಗಳ) ಬೃಂದಾವನವಿದ್ದದ್ದರಿಂದ, ಪ್ರತಿ ಗುರುವಾರ ಬೆಳಗಿನ ಹೊತ್ತು ಗಂಡಸರೆಲ್ಲ ಸೇರಿ ರಾಯರ ಅಷ್ಟೋತ್ತರ ಪಾರಾಯಣ ಮಾಡಿದರೆ ಸಂಜೆಗೆ ಹೆಂಗಸರು ಭಜನೆ ಮಾಡುತ್ತಿದ್ದರು. ಇವೆರಡು ಚಿತ್ರಗಳು ಯಾವತ್ತೂ ಮರೆಯುವದಿಲ್ಲ.ಆ ದಿನಗಳಲ್ಲಿ ಭಜನೆಗಳಲ್ಲಿ ಕೇಳಿದ ‘ನಮಃ ಪಾರ್ವತಿ ಪತಿ ನುತ ಜನ ಪರ namO ವಿರೂಪಾಕ್ಷ’, ‘ಪವಮಾನ ಪವಮಾನ ಜಗದ ಪ್ರಾಣ’, ಮೊದಲಾದ ಹಾಡುಗಳು ಇವತ್ತೂ ಆ ನೆನಪುಗಳನ್ನು ತರುತ್ತವೆ.
ಭಜನೆಗಳಲ್ಲಿ ಪಾಲ್ಗೊಳ್ಳಲು ಇಲ್ಲಿ ಅಮೆರಿಕದಲ್ಲೂ ಸಾಧ್ಯವಾದದ್ದು ‘ಶ್ರೀ ವ್ಯಾಸ ಭಜನಾ ಮಂಡಳಿ’ಯ ಸಂಪರ್ಕವಾದ ನಂತರ. ಪ್ರತೀ ಏಕಾದಶಿಗೊಮ್ಮೆ, ಹಬ್ಬ ಹರಿದಿನಗಳಂದು, ದಾಸರ ಪುಣ್ಯ ತಿಥಿಗಳಂದು, ಹೀಗೆ ಅವಕಾಶವಾದಗಲೆಲ್ಲ ನಡೆಯುವ ಭಜನೆಗಳಲ್ಲಿ ಪಾಲ್ಗೊಂಡು ಬಹಳ ಖುಷಿಪಟ್ಟಿದ್ದೇನೆ. ಪ್ರತೀ ಬಾರಿಯೂ ಭಾಗವಹಿಸಲು ಆಗದಿದ್ದರೂ, ಅವಕಾಶವಾದಾಗ ತಪ್ಪಿಸುವದಿಲ್ಲ. ಇವತ್ತು ಪುರಂದರ ದಾಸರ ಪುಣ್ಯ ದಿನದ ನಿಮಿತ್ತ ಇದ್ದ ಭಜನೆಯಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಈಗ ಅದೇ ನೆಪದಲ್ಲಿ ಭಜನೆಯ ಬಗ್ಗೆ ನಾಲ್ಕು ಮಾತು ಬರೆಯುತ್ತಿರುವೆ. ಈ ಭಜನೆಗಳಲ್ಲಿ ಎಷ್ಟೋ ಹೊಸ ಹಾಡುಗಳನ್ನು ಕೇಳಿದ್ದೇನೆ. ಮೊದಲ ಬಾರಿಗೆ ಇಷ್ಟವಾದವು ಎಷ್ಟೋ ಹಾಡುಗಳು. ಎರಡು ವಾರಗಳ ಹಿಂದೆ ವೈಕುಂಠ ಏಕಾದಶಿ ನಿಮಿತ್ತದ ಭಜನೆಯಲ್ಲಿ ಪುರಂದರ ದಾಸರ ಒಂದು ಪದವನ್ನು ಕೇಳಿದೆ. ಅದು ಎಷ್ಟು ಇಷ್ಟವಾಯಿತೆಂದರೆ, ಹಾಡಿನ ಪುಸ್ತಕದಲ್ಲಿ ಆ ಪುಟದ ಚಿತ್ರವನ್ನು ಫೋನಿನ ಕ್ಯಾಮರಾದಲ್ಲಿ ಸೆರೆಹಿಡಿದು ತಂದೆ. ಆ ಹಾಡು ಇದು (ಫೋಟೋದಿಂದ ಟೈಪಿಸದೆ ಗೂಗಲಿಸಿದಾಗ ಇಲ್ಲಿ ಸಿಕ್ಕಿದ್ದನ್ನು ಪೇಸ್ಟಿಸಿದೆ
),
ಕನಸು ಕಂಡೇನ ಮನದಲಿ ಕಳವಳಗೊಂಡೇನ ||ಪ||
ಏನ ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ ||ಅ.ಪ||ಪೋನ್ನದ ಕಡಗನಿಟ್ಟು ತಿಮ್ಮಯ್ಯ ತಾ | ಪೋಲ್ವನಾಮವನಿಟ್ಟು |
ಅಂದುಗೆ ಘಲುಕೆನ್ನುತಾ ಎನ್ನಮುಂದೆ | ಬಂದು ನಿಂತಿದ್ದನಲ್ಲೇ ||೧||ಮಕರ ಕುಂಡಲನಿಟ್ಟು ತಿಮ್ಮಯ್ಯ ತಾ | ಕಸ್ತೂರಿ ತಿಲಕನಿಟ್ಟು |
ಗೆಜ್ಜೆ ಘಲುಕೆನುತಾ ಸ್ವಾಮಿ ತಾ | ಬಂದು ನಿಂತಿದ್ದನಲ್ಲೇ ||೨||ಮುತ್ತಿನ ಪಲ್ಲಕ್ಕಿ ಯತಿಗಳು | ಹೊತ್ತು ನಿಂತಿದ್ದರಲ್ಲೇ |
ಛತ್ರಚಾಮರದಿಂದ ರಂಗಯ್ಯನ | ಉತ್ಸವ ಮೂರುತಿಯ ||೩||ತಾವರೆ ಕಮಲದಲಿ ಕೃಷ್ಣಯ್ಯ ತಾ | ಬಂದು ನಿಂತಿದ್ದನಲ್ಲೇ |
ವಾಯುಬೊಮ್ಮಾದಿಗಳು ರಂಗಯ್ಯನ | ಸೇವಯ ಮಾಡುವರೆ ||೪||ನವರತ್ನ ಕೆತ್ತಿಸಿದ | ಸ್ವಾಮಿ ಎನ್ನ | ಹೃದಯಮಂಟಪದಲ್ಲಿ |
ಸರ್ವಾಭರಣದಿಂದ ಪುರಂದರ | ವಿಠಲನ ನೋಡಿದೆನೇ ||೫||
ಗುರು ಪುರಂದರ ದಾಸರೇ ನಿಮ್ಮ ಚರಣ ಕಮಲವ ನಂಬಿದೆ ||ಪ||ಗರುವ ರಹಿತನ ಮಾಡಿ ಎನ್ನನು ಪೊರೆವ ಭಾರವು ನಿಮ್ಮದೇ ||ಅ.ಪ||ಒಂದು ಅರಿಯದ ಮಂದಮತಿ ನಾ | ನಿಮ್ಮದು ನಿಮ್ಮನು ನಂಬಿದೆ |ಇಂದಿರೇಶನ ಪಾದ ತೋರಿಸೋ ತಂದೆ ಮಾಡೆಲೋ ಸತ್ಕ್ರುಪೆ ||೧||ಮಾರಜನಕನ ಸನ್ನಿಧಾನದಿ | ಸಾರಗಾಯನ ಮಾಡುವ |ನಾರದರೆ ಈ ರೂಪದಿಂದಲಿ ಕೋರೆ ದರುಶನ ತೋರಿದೆ ||೨||ಪುರಂದರಾಲಯ ಘಟ್ಟದೊಳು ನೀ | ನಿರುತ ಧನವ ಗಳಿಸಲು |ಪರಮ ಪುರುಷನು ವಿಪ್ರನಂದದಿ | ಕರವ ನೀಡಿ ಯಾಚಿಸೆ ||೩||ಪರಮ ನಿರ್ಗುಣ ಮನವನರಿತು | ಸರುವ ಸೂರಿಯ ಗಯಿಸಿದ |ಅರಿತು ಮನದಲಿ ಜರಿದು ಭವಗಳ | ತರುಣಿ ಸಹಿತ ಹೊರ ಹೊರಟನೆ ||೪||ಅಜಭವಾದಿಗಳರಸನಾದ | ವಿಜಯವಿಠಲನ ಧ್ಯಾನಿಪ |ನಿಜ ಸುಜ್ಞಾನವ ಕೊಡಿಸ ಬೇಕೆಂದು | ಭಜಿಪೆನೋ ಕೇಳ್ ಗುರುವರ ||೫||
Posted on January 22, 2012, in ಓದು, ಕೇಳಿದ್ದು, ದಾಸರ ಪದ, ನೆನಪು, Uncategorized and tagged ಕನ್ನಡ ಪುಸ್ತಕ, ದಾಸರಪದ, ಪುರಂದರದಾಸರು, ಪುಸ್ತಕ, ವಿಜಯದಾಸರು, ವ್ಯಾಸರಾಯರು. Bookmark the permalink. Leave a Comment.









Leave a Comment
Comments (0)