h1

Incredible?

November 30, 2009

After all the hoopla of the Oscar has died down, after I forgot almost all the reviews I read about it, finally I watched the movie Slumdog Millionaire. If I were to describe the movie in one word, the word would be “Incredible”, literally mostly and figuratively in some small parts. I think the best part of the movie is the amazing work by Resul Pookutty. I felt I was in the middle of the busy Mumbai street, the slum and all those places in the movie. He brought all that into my living room. Rehman’s music is good but I don’t seem to remember any of it now, including the Jai Ho song. I think he has given much better music in other movies. Story build up and narration is in a good package but didn’t find much of build up. Overall an ok movie I guess. For a movie depicting hope and triumph, I felt the story could have been built up better.

I’m sure kids in India grow up hearing about the child abductions and how the kidnapped children are crippled and pushed into begging, at least I had heard of such stories while growing up. The question of “Darshan Do Bhagavan” and the story associated with how Jamal knows the answer seemed realistic. So did the way Jamal handles the question about “Satyameva Jayate.”  I liked nonlinear narration around the “Colt” revolver question. We are shown Jamal’s brother killing Mamman with a revolver and no one really says colt at that point; Jamal answers the question. In the next seen we see Salim calling himself the man with the colt revolver. That was good.

If those were the good parts, I wonder how much of the screenplay was written from the point of view of the slumdog kid and how much of it was with Danny Boyle’s (or the western audience’s) view point. Amitabh’s Zanjeer must have been many years before Jamal was born. Danny Boyle needs to counter that and some how. So what does he do? Makes young Jamal jump through the shit hole and show us his love for Amitabh. Was that a touch(?) extreme? You bet. What was that blue baby Ram doing in that narrow gully by the way? For Danny Boyle or the western audience it may seem strange for a Muslim boy to know what Ram holds in his hands. Does Boyle think India’s Hindu culture is alien to Indian Muslims? In any case the two question give him good pretext to show case the shit holes of the slum and also the post Babri Masjid demolition events. Whatever helps connect the dots in history and this Muslim boy from slums in Bombay I guess.

After spending some years in Agra, Jamal and Salim return to Mumbai. Describing that Jamal says, when we came back Bombay had become Mumbai. Was the name change that big of an impact in the day to day life of even slum dwellers? Don’t get me wrong, I have read elsewhere that the city had always been “amchi mumbai” for the common man on the street. Is that not right? What was that about the real American way the American tourist talks about? Was that supposed to show how good Americans are or was it an attempt to show that Americans throw money every where? Ek teer do shikar, eh?  In any case it was quite funny to see the way the Merc left by the American tourists gets dismantled systematically (I won’t be surprised if it really happens). Wonder why the Indian driver also went with them to see the dhobi ghat though.

Finally, do they really teach Alexandre Dumas’ “The Three Musketeers” in primary schools in India? I started learning English only from 5th standard so I don’t know :) . That’s another incredible thing I guess. Any way, nothing wrong with that. I liked the way he takes a blind guess and hits the jackpot.  So there was the show of luck playing its role too :) .

It was good to see Rahman, Resul Pookutty and Gulzar being recognized with Oscar.  I loved the Oscar acceptance speech of Resul Pookutty. I had this (in Kannada) to say after listening to the speech at that time.

 

h1

ತ್ರಿಕೂಟದ ಗಜೇಂದ್ರ, ಅವನ ಬಿಡುಗಡೆ

November 25, 2009

(ಇಂಟರ್ನೆಟ್ಟಿನಲ್ಲಿ ಇನ್ನೊಂದೆಡೆ ಹಿಂದೂಗಳ ಇನ್ನೊಂದು ಇತಿಹಾಸ ಎಂಬ ಪುಸ್ತಕದ ಬಗ್ಗೆ ವೆಂಡಿ ಡೊನಿಗರ್ ಸಂದರ್ಶನವನ್ನ ಓದಿ ನಗಬೇಕೋ ವ್ಯಥೆ ಪಡಬೇಕೋ ತಿಳಿಯಲಿಲ್ಲ. ರಾಮ, ಸೀತೆಯನ್ನ ಯಾಕೆ ಬಿಟ್ಟ ಎನ್ನುವದಕ್ಕೆ ಅವಳು ಊಹಿಸುವ ಕಾರಣ ಅತ್ಯದ್ಭುತ, ಗೀತೆಯ ಸಂದೇಶವನ್ನ ಅವಳು ಗ್ರಹಿಸಿದ ಪರಿಯೂ ಅಷ್ಟೇ, ಅದ್ಭುತ! ಬೇವು ಕುಡಿದಂತೆ ನಾಲಿಗೆಯೆಲ್ಲ ಕಹಿ ಕಹಿ. ಇತ್ತೀಚೆಗೆ ಕೇಳಿದ ಬನ್ನಂಜೆ ಅವರ ಉಪನ್ಯಾಸದ ಬಗ್ಗೆ ಒಂದೆರಡು ಮಾತು ಬರೆದು ಸಿಹಿ ಮಾಡಿಕೊಳ್ಳುವ ಪ್ರಯತ್ನ)

ಬನ್ನಂಜೆ ಗೋವಿಂದಾಚಾರ್ಯರ ಪ್ರವಚನಗಳನ್ನ ಕೇಳೋದು ನನಗಿಷ್ಟ. ಭಗವದ್ಗೀತೆಯ ಮೊದಲ ಅಧ್ಯಾಯದ ಮೊದಲ ೧೮ ಶ್ಲೋಕಗಳ ಸ್ವಾರಸ್ಯವನ್ನ ಅವರ ಉಪನ್ಯಾಸದಲ್ಲಿ ಕೇಳಿಯೇ ಸವಿಯಬೇಕು. ೧೮ ಹೇಗೆ ಜಯ, ಮಹಾಭಾರತ ಜಯದ ಕತೆ ಹೇಗೆ, ಆ ೧೮ ಶ್ಲೋಕಗಳಲ್ಲಿ ಹೇಗೆ “ಈ ಪಾಂಡವರ ಪಾಳೆಯದ ೧೧ ಯೋಧರನ್ನೂ ಹಾಗೂ ಆ ತನ್ನ ಪಾಳೆಯದಲ್ಲಿ ತನಗಾಗಿ ಸಾಯ ಬಂದಿರುವ ೭ ಯೋಧರನ್ನೂ’ ದುರ್ಯೋಧನ ಹೆಸರಿಸುತ್ತಾನೆ, ಅವೇ ಹೆಸರುಗಳನ್ನೇ ಯಾಕೆ ತೆಗೆದುಕೋಳ್ಳುತ್ತಾನೆ, ಎಲ್ಲದರ ವಿವರಣೆ ಅಧ್ಬುತ. ವಿವರಣೆಯ ಜೊತೆ ಜೊತೆಗೆ ನಮ್ಮ ಸಂಸ್ಕೃತಿಯ, ನಮ್ಮ ನೆಲದ ಕೃತಿಗಳನ್ನ ಇನ್ನೊಬ್ಬರು ಮಾಡಿದ ಅನುವಾದಗಳ ಮೂಲಕ ಓದುವ ಪರಿಸ್ಥಿತಿ ಬಂದೊದಗಿದ್ದರ ಬಗೆಗಿನ ಚಾಟಿ ಏಟಿನ ಮಾತುಗಳು ಸ್ವಾರಸ್ಯಕರವಾಗಿರುತ್ತವೆ :) .

ನಿನ್ನೆ ಹಿರಿಯರೊಬ್ಬರು ಬನ್ನಂಜೆಯವರ ’ಗಜೇಂದ್ರ ಮೋಕ್ಷ ಚಿಂತನೆ’ ಉಪನ್ಯಾಸ ಚನ್ನಾಗಿದೆ ಅಂತ ಹೇಳಿದರು. ಬನ್ನಂಜೆ ಅವರ ಅಂತರಜಾಲದ ಮನೆ ಆನಂದಮಾಲದಲ್ಲಿ ಆ ಉಪನ್ಯಾಸವಿದೆ, ಕೇಳಿದೆ. ಸ್ವಾರಸ್ಯಕರವಾಗಿದೆ. ಗಜೇಂದ್ರ ಮೋಕ್ಷ ಬರೀ ಆನೆಯೊಂದು ಮೊಸಳೆಯ ಕೈಗೆ ಸಿಕ್ಕು ಒದ್ದಾಡಿದ ಕತೆ, ತನ್ನ ಶಕ್ತಿ ಇದ್ದಷ್ಟು ತಾನೆ ಬಿಡಿಸಿಕೊಳ್ಳಲು ಯತ್ನಿಸಿ ಸೋತು ಕೊನೆಗೆ ಅಲ್ಲೇ ಅದೇ ಕೊಳದಲ್ಲೇ ಬೆಳೆದ ಕಮಲವೊಂದನ್ನು ಸೊಂಡಿಲಿನಲ್ಲಿ ಎತ್ತಿ ಹಿಡಿದು ಶ್ರೀಹರಿಗೆ ಅರ್ಪಿಸಿ ಅನನ್ಯವಾಗಿ ಅವನನ್ನ ಪ್ರಾರ್ಥಿಸಿದಾಗ ಗರುಡವಾಹನನಾಗಿ ಬಂದ ವಿಷ್ಣು ಮೊಸಳೆಯನ್ನ ಕೊಂದು ಗಜವನ್ನ ಉಳಿಸಿದ ಕತೆ ಪರಿಚಿತ. ಎಲ್ಲ ಪುರಾಣ ಕತೆಗಳಂತೆ ಇದೂ ಒಂದು ರಮ್ಯ ಕತೆ ಅಷ್ಟೇ ಅನಿಸುವಂಥದ್ದೇ. ಆನೆ ಮಾತನಾಡುವದು, ಸಾವಿರ ವರ್ಷಗಳ ಕಾಲ ಮೊಸಳೆಯೊಂದಿಗೆ ಹೋರಾಡುವದು, ಕೊನೆಗೆ ವಿಷ್ಣು ಗರುಡನ ಮೇಲೆ ಕುಳಿತು ಬರೋದು, ಬಂದು ಚಕ್ರವನ್ನ ಬಿಟ್ಟು ಮೊಸಳೆಯನ್ನ ಕೊಲ್ಲೋದು, ಸತ್ತ ಮೊಸಳೆಯ ಜನ್ಮ ಕಳೆದ ಹುಹು ಗಂಧರ್ವ ಅಲ್ಲಿ ಪ್ರತ್ಯಕ್ಷನಾಗುವದು, ಎಲ್ಲ ಕಲ್ಪನಾ ಲೋಕದ ಕತೆ ಅಲ್ಲವೆ? ಬನ್ನಂಜೆ ಅವರು ಈ ಉಪನ್ಯಾಸದಲ್ಲಿ ಈ ಕತೆಯ ಹಿಂದಿನ ಅಧ್ಯಾತ್ಮವನ್ನ ಸೊಗಸಾಗಿ ವಿವರಿಸುತ್ತಾರೆ.

ಗಜ ಎನ್ನುವದಕ್ಕೆ ಆನೆ ಅನ್ನುವದು ಒಂದು ಅರ್ಥವಾದರೆ  ’ಹುಟ್ಟುತ್ತ ಸಾಯುತ್ತ ಹೋಗವದು’ ಅಥವಾ ಜೀವ ಅನ್ನುವದೂ ಒಂದು ಅರ್ಥವಂತೆ. ಆ ಗಜೇಂದ್ರ ಇದ್ದ ಬೆಟ್ಟ ತ್ರಿಕೂಟ ಎನ್ನುವದು ಪ್ರತೀ ಜೀವನ ಅಜ್ಞಾನ, ಕಾಮ ಮತ್ತು ಕರ್ಮಗಳನ್ನ ಸೂಚಿಸಿದರೆ, ಆ ಬೆಟ್ಟದ ಕಾಡು, ಕಾಡಿನ ಗಿಡಗಂಟೆಗಳು, ಮುಳ್ಳುಗಳು, ಪಕ್ಷಿಗಳ ಸುಮಧುರ ಹಾಡು ಎಲ್ಲವೂ ಹೇಳುವದು ಜೀವನ ಅನುಭವಕ್ಕೆ ಬರುವ ಸುಖ ದುಃಖಗಳು. ಒಟ್ಟಿನಲ್ಲಿ ತ್ರಿಕೂಟ ಬೆಟ್ಟದ ಗಜ ಎಂದರೆ ಜ್ಞಾನ, ಇಚ್ಛೆ, ಕ್ರಿಯೆಗಳುಳ್ಳ ಜೀವ. ಆ ಗಜೇಂದ್ರ ತನ್ನ ಜೊತೆಗಿನ ಹೆಣ್ಣಾನೆಗಳ ಕೂಡಿ ಅಲ್ಲಿ ಮೆರೆದಿದ್ದ, ಅಲ್ಲಿಯ ಎಲ್ಲವೂ ತನ್ನದೇ ಎನ್ನುವಂತೆ. ಅಲ್ಲಿಯ ಸರೋವರದ ನೀರಿನಲ್ಲಿ ತನ್ನ ಜೊತೆಗಾತಿಯರೊಡನೆ ನೀರಾಟ ಆಡಿದ್ದ. ಆನಂದದಿಂದ ಇದ್ದ ಅನ್ನುವಾಗ ಅವನ ಕಾಲು ಹಿಡಿದು ನೀರಿನ ಒಳಗೆಳೆಯತೊಡಗಿದ ಮೊಸಳೆ ನಾನು ನನ್ನದು ಎನ್ನುವ ಮಮಕಾರವನ್ನ. ಪ್ರಾಣ ಹೋಗುವಾಗ ಮಮಕಾರ ಹಿಡಿದೆಳೆಯುತ್ತಿದೆ. ಅದು ಬಿಡುವದಿಲ್ಲ ಇವನೂ ಬಿಡುವದಿಲ್ಲ. ಇವನ ಜೊತೆಗಿನ ಆನೆಗಳೂ ಸಹಾಯ ಮಾಡಲಾರವು. ಜಗ್ಗಾಟ ನಡೆದಿದೆ, ಸಾವಿರ ವರ್ಷ. ಮತ್ತೆ ಮತ್ತೆ ಹುಟ್ಟಿ ಬಂದರೂ ಮಮಕಾರಕ್ಕೆ ಮತ್ತೆ ಮತ್ತೆ ಸಿಕ್ಕಿ ಬೀಳುವದನ್ನ ಈ ಸಾವಿರ ವರ್ಷದ ಹೋರಾಟ ಸೂಚಿಸುವದಂತೆ. ಕಡೆಗೆ ಗಜರಾಜ ಸೋತ. ತನ್ನ ಮೇಲೆ, ತನ್ನ ಸಹಚರರ ಮೇಲೆ ಇದ್ದ ನಂಬಿಕೆಯೆಲ್ಲವೂ ಹೋಯಿತು. ದೇವನೊಬ್ಬನೇ ತನ್ನನ್ನು ಬಿಡಿಸಬಲ್ಲ ಎನ್ನುವದು ಮನವರಿಕೆ ಆಯಿತು. ಆ ದೇವನ ಪ್ರಾರ್ಥನೆ ಮಾಡತೊಡಗಿದ. ಹಿಂದಿನ ಜನ್ಮದಲ್ಲಿನ ಸಂಸ್ಕಾರ ಬಲದಿಂದಲೇ ಅವನಿಗೆ ಪ್ರಾರ್ಥನೆಯೆಡೆಗೆ ಮನಸ್ಸು ಹೊರಳಿತು. ಹಾಗಾದರೆ ಗಜೇಂದ್ರ ಭಾಗವತ ಶ್ಲೋಕದಲ್ಲಿ ಬರೆದಂತೆ ಸಂಸ್ಕೃತದಲ್ಲೇ ಕರೆದನೇ ಎನ್ನುವದು ಪೂರ್ವಪಕ್ಷ. ಆನೆ ಅನನ್ಯವಾಗಿ ಕರೆದದ್ದು ತಿಳಿಯದೇ ಇದ್ದರೆ ಅವನು ದೇವರಾದರೂ ಹೇಗಾದಾನು? ಆನೆ ಪ್ರಾರ್ಥಿಸಿತು, ದೇವ ಬಂದ; ಭಾಗವತದ ಕತೆ ಮನುಷ್ಯರ ತಿಳಿವಿಗಾಗಿ ಹೇಳಿದ್ದು ಎನ್ನುವದು ಸಮಾಧಾನ (ನನಗೆ ತಿಳಿದಂತೆ). ಗಜವನ್ನ ಉಳಿಸಲಿಕ್ಕೆ ಅಜ ಬಂದ. ಹುಟ್ಟು ಸಾವುಗಳುಳ್ಳವನ ಬಿಡುಗಡೆಗೆ ಹುಟ್ಟು ಸಾವಿಲ್ಲದವನ ಆಗಮನ. ಅರಿ(ಶತ್ರು)ಯ ಕೊಲ್ಲಲು ವಿಷ್ಣುವಿನ ಅರಿ(ಚಕ್ರ) ಸಿದ್ಧ. ನಕ್ರ ವಧೆಗಾಗಿ ಚಕ್ರ ಪ್ರಯೋಗ. ಚಕ್ರ ಪ್ರಹಾರಕ್ಕೆ ಸಿಕ್ಕ ಮೊಸಳೆಗೆ ಆದದ್ದು ಪ್ರಾಣಾಂತಿಕ ನೋವೋ ಅಥವಾ ಮೊಸಳೆಯಾಗಿದ್ದ ಗಂಧರ್ವನಿಗೆ ಬಿಡುಗಡೆಯ ಸಂತೋಷವೋ? ಗಜೇಂದ್ರನನ್ನ ಆ ಮೊಸಳೆ ಹಿಡಿದುಕೊಂಡದ್ದು ತನ್ನ ಆಹಾರಕ್ಕಾಗೋ ಅಥವಾ ಶಾಪ ವಿಮೋಚನೆಗಾಗೋ? ಕರೆದವನು ಗಜೇಂದ್ರ ಮೊದಲು ವಿಮೋಚನೆಯಾದದ್ದು ಮೊಸಳೆಗೆ. ದೇವತೆಗಳು ಹೂಮಳೆಗರೆದರು. ಗಜೇಂದ್ರನಿಗೂ ಮುಕ್ತಿಯಾಯಿತು, ಭಗವಂತನ ಸಾರೂಪ್ಯ ಸಿಕ್ಕಿತು. ಶಾಪಗ್ರಸ್ತ ಜೀವರಿಬ್ಬರ ಶಾಪ ವಿಮೋಚನೆ ಆಯಿತು. ಛಂದೋಮಯೇನ ಗರುಡೇನ… ವೇದ ಪ್ರತಿಪಾದ್ಯ ವಿಷ್ಣು (ತಾಪಸ ಮನ್ವಂತರದ ಈ ಕತೆಯಲ್ಲಿ ಬಂದದ್ದು ತಾಪಸ ರೂಪದಲ್ಲೇ) ಬಂದು ಇಬ್ಬರ ಬಿಡುಗಡೆ ಮಾಡಿದ. ಹಾಗಾದರೆ ಗಜೇಂದ್ರ ವೇದ ಮಂತ್ರಗಳಿಂದಲೇ ಪ್ರಾರ್ಥಿಸಿದನೇ?

ಒಟ್ಟಿನಲ್ಲಿ ಗಜೇಂದ್ರನ ಕತೆ ಪ್ರತಿಯೊಂದು ಜೀವದ ಕತೆ. ಪ್ರಾಣ ಹೋಗುವಾದ ಬೇರಾರೂ ಬರುವದಿಲ್ಲ, ಬಂದರೆ ಭಗವಂತನೊಬ್ಬ ಬರಬೇಕು. ಪೂರ್ವಜನ್ಮದ ಸಂಸ್ಕಾರದಿಂದ ಪ್ರಾಣ ಹೋಗುವಾಗ ಭಗವಂತನ ಸ್ಮರಣೆ ಬರಬೇಕು. ಗಜೇಂದ್ರ ಮೋಕ್ಷದ ಸಂದೇಶಗಳೆಂದರೆ, ದೇವರು ಒಬ್ಬ ಕೈಬಿಡುವದಿಲ್ಲ. ಬೇರೆಲ್ಲವೂ/ಬೇರೆಲ್ಲರೂ ಕೈಬಿಟ್ಟಾಗ, ಸಹಾಯಕ್ಕೆ ಒದಗದೇ ಇದ್ದಾಗ, ಅನನ್ಯ ಶರಣಾಗತಿಯಿದ್ದರೆ ದೇವ ಕೈ ಹಿಡಿಯುತ್ತಾನೆ. ಇನ್ನೊಂದು ಸಂದೇಶವೆಂದರೆ ದೇವರು ನಾವಿದ್ದಲ್ಲಿಗೆ ಬರಬೇಕು. ನಮ್ಮ ಮೇಲಿನ ಕರುಣೆಯಿಂದ, ನಮ್ಮ ಉಪಾಸನೆಗೆ ಮೆಚ್ಚಿ ನಾವಿದ್ದಲ್ಲಿಗೆ ಬರಬೇಕು, ಬರುತ್ತಾನೆ.

ಅಂದಹಾಗೆ ಗಜೇಂದ್ರ ಮೋಕ್ಷ ತಮಿಳುನಾಡಿನ ಕತೆಯಂತೆ. ಪಾಂಡ್ಯ ದೇಶದ ಇಂದ್ರದ್ಯುಮ್ನ ಎನ್ನುವ ರಾಜನೇ ಶಾಪಗ್ರಸ್ತನಾಗಿ ಗಜೇಂದ್ರನಾದನಂತೆ. ಆತನೊಬ್ಬ ಶ್ರೇಷ್ಠ ದ್ರಮಿಳ (ತಮಿಳ) ಎನ್ನುತ್ತದೆ ಭಾಗವತದ ಗಜೇಂದ್ರ ಮೋಕ್ಷದ ಉಪಸಂಹಾರ. ಹುಹು ಎಂಬ ಶಾಪಗ್ರಸ್ತ ಗಂಧರ್ವನೇ ಮೊಸಳೆಯಾಗಿರುತ್ತಾನೆ.

ಬನ್ನಂಜೆ ಅವರ ಉಪನ್ಯಾಸದಲ್ಲಿ ಕೇಳಿದ ಗಜೇಂದ್ರ ಮೋಕ್ಷದ ಕತೆಯ ವಿಷಯ ನನಗೆ ತಿಳಿದಂತೆ ಬರೆದಿರುವೆ. ಅಜ-ಗಜ ಶಬ್ದಗಳಿಗೆ ಕೇಳಿದ ಹೊಸ ಅರ್ಥ ಅಜಗಜಾಂತರ ಶಬ್ದಕ್ಕೂ ಹೊಸ ಅರ್ಥ ಕೊಟ್ಟಿದೆ.

ಪುರಾಣ ಕತೆಗಳನ್ನ ಕೇಳುವಾಗ/ಓದುವಾಗ ಪೂರ್ವಪಕ್ಷಗಳೂ, ಪ್ರಶ್ನೆಗಳೂ, ಅಪನಂಬಿಕೆಗಳು ಹುಟ್ಟುವದು ಸ್ವಾಭಾವಿಕ, ಅವು ಹುಟ್ಟದೇ ಇದ್ದರೆ ಆಶ್ಚರ್ಯ! ಮಂಥನ ನಡೆಯಬೇಕು ಮನಸ್ಸಿನಲ್ಲಿ. ಸಮುದ್ರ ಮಥನದಂತೆ ಮನಸ್ಸಿನ ಮಥನದಲ್ಲೂ ಮೊದಲು ವಿಷ ಹುಟ್ಟುವ ಸಂಭವವೇ ಹೆಚ್ಚು. ಗುರುಗಳ, ಆ ದೇವನ ಅನುಗ್ರಹದಿಂದ ಆ ಕಾರ್ಕೂಟಕವನ್ನ ದಾಟಿದರೆ ಮುಂದೆ ಅಮೃತದ ಹಾದಿ. ಪುರಾಣ ಕತೆಗಳನ್ನ ಮಥಿಸುವದೇ ಆದರೆ ಅಮೃತಕ್ಕಾಗಿ ಮಥಿಸಬೇಕು. ನಮ್ಮ ಪೂರ್ವಗ್ರಹಗಳ, ನಮ್ಮ ವಾಸನೆಗಳ ಚೌಕಟ್ಟನ್ನ ಮೀರಿ ಮಥಿಸಬೇಕು, ಅಮೃತ ಸಿಗಬಹುದು.

h1

Finding Carnatic Music

November 21, 2009

Thanks to the solitude in the car, at home for nearly a month now and also to the digital age and the technology it has provided, I have been listening to carnatic classical music more often now. I don’t think I have listened to as much classical music in my life before. I don’t understand a thing. I would love to be able to understand and identify what is being played. May be one day in future, for now I’m quite happy taking dips in this river of music. It has been very soothing and refreshing. Be it BMK singing ‘endaro mahanubaavulu’, or Yesudas singing ‘jaanaki ramana’ or Ms Revathi (from carnaticindia.com) singing the anandaamrutakarshini amrutavarshini or .. well the list goes on. Thought I’ll put down the ones I have been playing again and again over the last month. Here they are with link to wherever I could find them online,

  • endaro mahanubaavulu’ by Balamurali Krishna –  This is the last song from the tyagaraja pancharatna kritis CD I accidentally came across and bought during my last India trip. It was languishing with other CDs at home for a long time. Once I found it again and kept it in the car, I started listening to it often. I love the lyrics and the meaning as much (or even a bit more?) as BMK singing it.
  • ‘jagadaanandakaaraka’ by Balamurali Krishna –  This is song number 1 in the CD I mentioned above. The duration of the song seemed quite daunting in the beginning. All that raagalaapa meant I switched ahead midway to the last song, ‘endaro’ (yes, nothing in between seemed to appeal.) However over time this too has become my favorate. Now whenever the CD is playing in the car, I mostly listen to 1 and 6. Slowly I have started listening to the ones from 2 to 5 also :) .
  • Anandamrutakarshini – amrutavarshini - by Ms. Revathi. This has been my every day morning song these days. Listening to this makes the mind still and still be active, pure joy. Amazing!
  • Sarasijanaabha sOdari – by Sankaran Namboodiri – This one by Sri Deekshatar is fast becoming another favorite. Especially the part where it has ’sri guruguha janani mada shamani’.
  • Brochevarevare by Yesudas – I had heard many melodious hindi movie songs sung by Yesudas. I knew he is also a great carnatic classical singer. While searching on the net found this song and I am amazed by the way he sings. The ease with which he moves between low and high sound (what is it called in musical terms?) and the breath control he has around the end of this song seem out of this world. The only issue I had with this one was that the ‘aardra bhaava’ of the lyrics seems to have given way to the pace. May be it is just me, but that is the feeling I still get whenever I listen to this one.
  • jaanaki ramana by Yesudas – This one is perfect, blissful. I love the part where he goes ‘gaana lOla ghana tamaala neela…”. That’s stuck in my head and heart for a while now.

There are others like the ‘Chandracooda shivashankara paarvati ramana..”, “Gajavadana bEDuve”, etc. Some other time about those.

PS: While on Yesudas, I remember the song (not a classical one, probably from a movie) ‘mai bhi hu bachapanse man chala’ he sang (along with another female singer, I forgot the name) on TV long long ago. Though I heard it only once, it has remained with me. Was it my teen age that latched on to that seemingly naughty song? I guess. If any of you know where I can find that song, please let me know. I’m not sure whether my opinion of that song changes if I listen to it now :) . Hope not!

update: After a good Googaleshwara search I found this song here, it starts as Tishta nadi si tu chanchala… and I still like it :)

h1

ಸುಭಾಷಿತ

November 19, 2009

ಬಹಳ ಹಿಂದೆ ಈ ಸುಭಾಷಿತವನ್ನ ಬರೆದಿಟ್ಟುಕೊಂಡಿದ್ದೆ, ಕಣ್ಣಿಗೆ ಕಾಣೋ ಹಾಗೇ ಇರ್ಲಿ ಅಂತ ಆಫೀಸ್ ಟೇಬಲ್ಲಿನ ಮೇಲೆ ಇಟ್ಟುಕೊಂಡಿದ್ದೆ. ಇವತ್ತು ಅದನ್ನ ಕನ್ನಡಕ್ಕೆ ಅನುವಾದ ಮಾಡಬೇಕು ಅನಿಸ್ತು.

ವಿದ್ಯೆಯಿಪ್ಪುದು ವಿನಯ
ವಿನಯದಿಂ ಬಪ್ಪುದರ್ಹತೆಯು
ಅರ್ಹತೆಯೆ ತಂದಿಪ್ಪುದು ಹಣವ
ಹಣದಿಂದ ಧರ್ಮ ಅದರಿಂದ ಸುಖ

(ವಿದ್ಯಾ ದದಾತಿ ವಿನಯಂ ವಿನಯಾದ್ಯಾತಿ ಪಾತ್ರತಾಂ
ಪಾತ್ರತ್ವಾದ್ಧನಮಾಪ್ನೋತಿ ಧನಾದ್ಧರ್ಮಂ ತತಃ ಸುಖಂ)

ಹಂಸಾನಂದಿ ಅವರು ಮಾಡೊ ಸುಭಾಷಿತಗಳ ಅನುವಾದ ನನಗಂತೂ ಭಾಳಾ ಇಷ್ಟ. ಅವರು ತಮ್ಮ  ಹಂಸನಾದ ಬ್ಲಾಗಿನಲ್ಲಿ ಹಾಕಿದ ಸುಭಾಷಿತಗಳಲ್ಲೆ ಕೆಲವನ್ನ ನಾನೂ ಅನುವಾದ ಮಾಡಿಟ್ಕೊಂಡಿದ್ದೆ. ಒಳ್ಳೊಳ್ಳೆ ಸುಭಾಷಿತಗಳನ್ನ, ಅನುವಾದಗಳನ್ನ ಹಾಕ್ತಿರೋದಕ್ಕೆ ಅವರಿಗೆ ಧನ್ಯವಾದಗಳನ್ನ ಹೇಳ್ತಾ ನನ್ನ ಅನುವಾದಗಳನ್ನ ಹಾಕ್ತಾ ಇದ್ದೇನೆ.

ಸದ್ಗುಣಗಳೆ ದೂತರಾದಾಗ ಸಜ್ಜನರು ದೂರದಲ್ಲಿದ್ದರೇನಾಯ್ತು
ಕೇದಗೆಯ ಕಂಪ ಮೂಸಲು ತಾವೇ ಬಂದಾವು ದುಂಬಿಗಳು

(ಗುಣಾಃ ಕರೋತಿ ದೂತತ್ವಂ ದೂರೇsಪಿ ವಸತಾಂ ಸತಾಂ|
ಕೇತಕೀಗಂಧಮಾಘ್ರಾಯ ಸ್ವಯಮಾಯಾಂತಿ ಷಟ್ಪದಾಃ ||)

ಹುಡುಕಿಟ್ಟಿರಬೇಕು ಹಾದಿ ಒದಗುವ ಕುತ್ತುಗಳೆಣಿಸಿ
ತೋಡುವುದುಂಟೆ ಭಾವಿ ಮನೆ ಹೊತ್ತಿ ಉರಿವಾಗ

(ಚಿಂತನೀಯಾ ಹಿ ವಿಪದಾಂ ಆದೌ ಏವ ಪ್ರತಿಕ್ರಿಯಾ |
ನ ಕೂಪಖನನಂ ಯುಕ್ತಂ ಪ್ರದೀಪ್ತೇ ವಹ್ನಿನಾ ಗೃಹೇ ||)

ಹಣ ಕಸಿವ ಗುರುಗಳು ಸಿಕ್ಕಾರು ಸಾಕಷ್ಟು ಕಲಿವರ
ಮನ ಕಸಿವ ಗುರುಗಳು ವಿರಳ ಲೋಕದೊಳು

ಹೊತ್ತಿಗೆಯಲ್ಲಿನ ಅರಿವು ಮತ್ತೊಬ್ಬರ ಕೈಗಿತ್ತ ಹಣ
ಹೊತ್ತಿಗೆ ಹತ್ತಿರವಿರದಿರೆ ಅದು ಅರಿವಲ್ಲ ಹಣವಲ್ಲ

ಉರಿದು ಬೂದಿಯಾದ ದೇಹ ತಿರುಗಿ ಬರುವದೆ
ಇರುವಾಗ ಸಾಲ ಮಾಡಿದರೂ ಸರಿ ತುಪ್ಪ ಕುಡಿ

(ಭಸ್ಮೀಭೂತಸ್ಯ ದೇಹಸ್ಯ ಪುನರಾಗಮನಂ ಕುತಃ |
ತಸ್ಮಾತ್ ಸರ್ವ ಪ್ರಯತ್ನೇನ ಋಣಂ ಕೃತ್ವಾ ಘೃತಂ ಪಿಬೇತ್ ||)

h1

ಕೂಸು ಇದ್ದ ಮನೆಗೆ …

November 6, 2009

ಕೂಸು ಇದ್ದ ಮನೆಗೆ ಬೀಸಣಿಗೆ ಯಾಕೆ
ಕೂಸು ಕಂದಮ್ಮ ಒಳ ಹೊರಗೆ
ಕೂಸು ಕಂದಮ್ಮ ಒಳ ಹೊರಗೆ ಆಡಿದರೆ
ಬೀಸಣಿಗೆ ಗಾಳಿ ಬೀಸೀತ …

ಮಾಡದಾಗ ಇಟ್ಟಿದ್ದ ಪುಸ್ತಕ ಎಲ್ಲ ಕೆಳಗ ಹರವಿದೆಲ್ಲೋ ಪುಟ್ಟ ಅನ್ತಾ  ಒಂದು ಕಡೆ ಇಂದ ಮತ್ತೆ ಎತ್ತಿ ಇಡ್ತಾ ಬಂದರೆ ಇನ್ನೊಂದು ಕಡೆ ಇಂದ ಅವ ಹೊರಗ ಹಾಕ್ತಾ ಬರ್ತಾನೆ. ಮೂಡಿದ್ದರೆ ತಾ ತೆಗೆದದ್ದನ್ನ ತಾನೆ ಎತ್ತಿಡ್ತಾನೆ ಮತ್ತೆ ಮುಂದಿನ ಕ್ಷಣದಲ್ಲೇ‌ ಎಲ್ಲಾ ನೆಲಕ್ಕೆ  ವಾಪಸ್ ಹಾಕ್ತಾನೆ. ಇಲ್ಲೇ‌ ಇದ್ದ ಅನ್ನೋದರೊಳಗೆ ‘ವಾಕುಮ್ ವಾಕುಮ್’ ಅಂತ ತನ್ನ ಆಟಿಗೆ ವ್ಯಾಕ್ಯೂಮ್ ಕ್ಲೀನರ್ ಹಿಡಿದು ನಡೆದೇ ಬಿಡ್ತಾನೆ. ನಿಜವಾದ ವ್ಯಾಕ್ಯೂಮ್ ಕ್ಲೀನರ್ ಹೊರಗೆ ಬಂದರೆ ಅಂಜಿ ಅಲ್ಲೇ ದೂರದಲ್ಲೇ ನಿಂತಿರ್ತಾನೆ. ಪಾಟಿಯೋ ಬಾಗಿಲು, ಹೊರ ಬಾಗಿಲು ತೆಗೀತೀವಿ ಅನ್ನೋ‌ ಸೂಚನೆ ಸ್ವಲ್ಪವೇ‌ ಸಿಕ್ಕರೂ‌ ಸಾಕು ಕ್ಷಣಾರ್ಧದಲ್ಲೇ‌ ಹಾಜರ್ ಅಲ್ಲಿ. ಹಿತ್ತಲಿಗೆ ಹೊರ ಬಿದ್ದರೆ ಮಣ್ಣಾಟ, ಮುಂಬಾಗಿಲಿಂದ ಹೊರಬಿದ್ದರೆ  ‘ಕ್ವಾಕ್ ಕ್ವಾಕ್’ ಅಂತಾ ಡಕ್ ಪಾಂಡಿನ ಕಡೆಗೆ ಮುಖ.ಅಪ್ಪ ಇದ್ದರೆ ಅಪ್ಪ, ಇಲ್ಲ ಅಮ್ಮನ ಕೈ ಹಿಡಿದು ಎಳೆಕೊಂಡು ಹೋದನೇ ತನಗೆ ಬೇಕಾಗಿದ್ದ ಕಡೆ. ‘Free Electrons are like toddlers’ ಅಂತಿದ್ದರಂತ ನನ್ನ ಗೆಳೆಯನೊಬ್ಬನ ಟೀಚರ್.

ನಾಯಿ ಮರಿ ನಾಯಿ ಮರಿ ಹಾಡು ಬಂದರೆ ನಾವೂ ಬೌ ಬೌ ಅನ್ಬೇಕು, Five Little Soldirsನ್ನ ಅದರ ಜೊತೆಗೇ ಹಾಡ ಬೇಕು. ‘ಬಾರೆ ಗೋಪಮ್ಮ ನಿನ್ನ ಬಾಲಯ್ಯ ಅಳುತಾನೆ’ ಅಂದರೆ ನಗು ಮುಖ ಮಾಡಿ ಹಾಡು ಕೇಳ್ತಾನೆ. ಮಲಗೋ ಮಗನೇ ರಾತ್ರಿ ಬಹಳ ಆಯಿತು ಅಂದರೆ ಇನ್ನೂ ಹಾರಾಡ್ತಾ ಇರ್ತಾನೆ. ‘ಆನಂದ ಆನಂದ’ ಹೇಳಲೀ‌ ಅಂತ ಅಮ್ಮ ಅಂದರೆ ಅಮ್ಮನ ತೋಳ ಮೇಲೇ ತಲೆ ಇಡೊದಕ್ಕೆ ರೆಡಿ. ‘ತಾರಮ್ಮಯ್ಯ ಯದುಕುಲ ವಾರಿಧಿ ಚಂದ್ರಮನ’ ಅಂತ ಅಮ್ಮ ಹಾಡಿದರೆ ಅಪ್ಪನೂ ಧ್ವನಿಗೂಡಸ್ತಾನೋ‌ ಎನೋ‌ ಅಂತ ಅಪ್ಪನ ಮುಖ ನೋಡ್ತಾನೆ ತುಂಟ! ಕೆಲಸ ಅಂತ ಲ್ಯಾಪ್ಟಾಪ್ ಹಿಡಿದು ಅಪ್ಪ ಹೊರಗಿನ ರೂಮಿಗೆ ಹೊರಟರೆ ‘ಅಪ್ಪ ಆಪೀಸ್, ಅಪ್ಪ ಆಪಿಸ್’ ಅನ್ನೂದಕ್ಕೆ ಶುರು.

 

ಅಕ್ಕ-ಬುಕ್ಕ  ಅಕ್ಕ ಬುಕ್ಕ ಅಂತಿದ್ದವನ ಶಬ್ದ ಭಂಡಾರ ಬೆಳೀತಾ ಇದೆ. ಪುಟ್ಟಾ,, ಪುಟ್ಟಪ್ಪ, ಹೋಗು, ಗೋ, ಕುಕ್ಕರ್, ಅಪ್ಪಾ  ಬಂದು, ಅಮ್ಮಾ  ಬಂದು, ಹೋತ್, ಪೇನ್ (ಪ್ಲೇನ್), ಬಸ್, ಅಂಬೆಲ್ಲಾ (ಅಂಬ್ರೆಲ್ಲಾ) … ಹೊಸ ಶಬ್ದಗಳು ಹಾಗೇ ಸೇರ್ತಾನೆ ಇವೆ. ಇನ್ನೂ ಕೆಲವಷ್ಟು  ಶಬ್ದ ನಾಲಿಗೆ ತುದೀಲೇ ಇದೆ, ಇದೋ ಹೇಳೇ ಬಿಟ್ಟೆ ಅನ್ನೋ‌ ಹಾಗೆ ಮುಖ ಮಾಡ್ತಾನೆ ಆದರೆ ಹೇಳೋದಿಲ್ಲ. ಮಕ್ಕಳು ಮಾತು ಕಲಿಯೋದು, ಅವರ ಮಾತುಗಳನ್ನ ಕೇಳೋದು ನಿಜಕ್ಕೂ ರೋಮಾಂಚಕ. ಸುತ್ತಲಿನವರು ಆಡುವದನ್ನ ಕೇಳ್ತಾ ಕೇಳ್ತಾ ತಾವೂ‌ ಹಾಗೇ‌ ನುಡಿದೇ ಬಿಡ್ತಾರೆ, ತಮ್ಮ ಕಿವಿಗೇ ಕೇಳಿದ್ದು  ತಮಗೇ‌ ಇಷ್ಟವಾಗಿ (ಅಥವಾ ಸ್ಪಷ್ಟವಾಗಿ ಬರಲಿಲ್ಲ ಅಂತ ಅನಿಸಿ?)‌ ಅಂದಿದ್ದನ್ನೇ ಅಂತಾ ಹೋಗ್ತಾರೆ, ಸಂಗೀತಗಾರರು ರಿಯಾಜ್ ಮಾಡಿದಂತೆನಾ ಅದೂ?‌ ನಮ್ಮ ಕಿವಿಗಂತೂ ಸಂಗೀತವೇ!

ಹೊರಗಿನ ಕೋಣೇಲಿ ಕೂತು ಲ್ಯಾಪ್ಟಾಪಿನಲ್ಲಿ ಮಗ್ನನಾದಾಗ ಅಲ್ಲಿ ಒಳಗಿನ ರೂಮಿಂದ ‘ಅಪ್ಪ ಆಪೀಸ್’ ಅನ್ನೋದು ಕೇಳಿಸಿದಂತೆ ಅನಿಸುತ್ತದೆ, ತಕ್ಷಣ ನೆನಪಾಗುತ್ತದೆ; ನಮ್ಮ ಕೂಸು ಕಂದಮ್ಮ ಅಮ್ಮನ ಜೊತೆಗೆ ಅಜ್ಜ ಅಜ್ಜಿ  ಹತ್ತರಕ್ಕ,  ಬೆಂಗಳೂರಿಗೆ ಹೋಗಿ ಒಂದು ವಾರ ಆತು. ಹೋದ ಶನಿವಾರ ಎತ್ತಿಟ್ಟಿದ್ದ  ಅವನ ಪುಸ್ತಕ ಭಂಡಾರ ಅಲ್ಲೇ ಇದೆ, ಅವನ ಆಟಿಗೆ ಸಾಮಾನು ಅವುಗಳ ಜಗಾ ಬಿಟ್ಟು ಕದಲಿಲ್ಲ. ಮನೆ ಮನ ಎಲ್ಲ ಭಣ ಭಣ.

ನಮ್ಮ ಪುಟ್ಟಪ್ಪನ ಬಗ್ಗೆ ಇಷ್ಟೆಲ್ಲ ಬರದಿದ್ದರಿಂದ ದಿಟ್ಟಿ  ಆಗ್ತದೇನೋ‌; ದಿಟ್ಟಿ  ತಗೀಬೇಕು. “ನಾಯಿ ದೃಷ್ಟಿ, ನರೀ ದೃಷ್ಟಿ, ಅವರ ದೃಷ್ಟಿ, ಇವರ ದೃಷ್ಟಿ, ಅಪ್ಪನ ದೃಷ್ಟಿ, ಅವ್ವನ ದೃಷ್ಟಿ …. ಥೂ ಥೂ ಥೂ!”

h1

ತುಂಗಭದ್ರೆಯ ಪ್ರವಾಹದಲ್ಲಿ ಚೀಕಲಪರವಿ, ವಿಜಯದಾಸರ ಊರು …

October 25, 2009

ವಿಜಯ ದಾಸರ ಊರು ಚೀಕಲಪರವಿ, ಅಲ್ಲಿಯ ಅಶ್ವತ್ಥ ಕಟ್ಟೆ, ನರಸಿಂಹ ದೇವರು, ವಿಜಯದಾಸರ ಮನೆಗಳನ್ನ ಕೆಲವು ವರ್ಷಗಳ ಹಿಂದೆ ನೋಡಿದ್ದೆ. ವಿಜಯದಾಸರ ಮನೆಯ ಜಾಗ ಎತ್ತರದ ಮೇಲಿದೆ. ಅಲ್ಲಿಂದ ಎಷ್ಟೋ ದೂರದಲ್ಲಿದೆ ಅನಿಸಿದ್ದ ತುಂಗಭದ್ರೆ ಅವರ ಮನೆ ಮೆಟ್ಟಿಲಿಗೆ ಬಂದಿತ್ತಂತೆ. ಅಶ್ವತ್ಥ ಕಟ್ಟೆ ಯೇನು, ಆ ಅಶ್ವತ್ಥ ಮರದ ತುದಿ ಮಾತ್ರ ಹೊರಗೆ ಕಾಣುವಷ್ಟು ನೀರು ಬಂದಿತ್ತಂತೆ ಅಂತ ನನ್ನ ತಮ್ಮ ಫೋನಿನಲ್ಲಿ ಹೇಳಿದಾಗ ನಂಬಲಿಕ್ಕೇ‌ ಆಗಲಿಲ್ಲ. ಅಲ್ಲಿಯ ಪ್ರತ್ಯಕ್ಷ ಅನುಭವದ ಬರಹ ಗಿರಿ ದಾಸ ಬರೆದು ಕಳಿಸಿದ್ದನ್ನ ಓದಿದಾಗಲೇ ಪರಿಸ್ಥಿತಿ ಎಷ್ಟು ಗಂಭೀರವಾಗಿತ್ತು ಎನ್ನುವದು ತಿಳಿಯಿತು. ೨೦ ಆಳು ನೀರು ಮುತ್ತಿದರೆ ಪರಿಸ್ಥಿತಿ ಹೇಗಿರಬಹುದು ಅನ್ನುವದನ್ನ ಕಲ್ಪಿಸಿಕೊಳ್ಳುವದೂ ಹೆದರಿಕೆ ಹುಟ್ಟಿಸುತ್ತದೆ.

ಗಿರಿ ದಾಸ್ ಬರಹ ಇಲ್ಲಿ ಕೆಳಗಿದೆ (ಇಲ್ಲಿ ಹಾಕುವ ಬಗ್ಗೆ ತಿಳಿಸಿರುವೆ, ಅವರ ಅಭ್ಯಂತರವಿರಲಿಕ್ಕಿಲ್ಲ ಅಂದುಕೊಂಡಿರುವೆ).

———- Forwarded message ———-
From: Giri das <giri.das@….>
Date: 2009/10/16
Subject: ಹಿಂದೆಂದು ಕಂಡರಿಯದ ಆಶ್ವಿಜ ಶುದ್ಧ ದ್ವಾದಶಿ….
To: MadhwaYuvaParishat@yahoogroups.com, nilaya@yahoogroups.com

ಶ್ರೀ ವಿಜಯದಾಸರು ಹುಟ್ಟಿದ , ವಾಸಿಸಿದ ತುಂಗಭದ್ರೆಯ ತಟದಲ್ಲಿದ್ದ ಚೀಕಲಪರವಿ ಕ್ಷೇತ್ರ ಜಲಪ್ರಳಯದ ಭೀತಿ ಅನುಭವಿಸಿದ ಪ್ರತ್ಯಕ್ಷ ಅನುಭವ . (–ಶ್ರೀ ವಿಜಯದಾಸರ ವಂಶಿಕರಾದ ಶ್ರೀ ಚೀಕಲಪರವಿ ಜಗನ್ನಾಥ ದಾಸರಿಂದ ತಿಳಿದದ್ದು ) ಏಕಾದಶಿ ಸಂಜೆಯಿಂದ ತುಂಗೆ ತನ್ನ ಪ್ರವಾಹವನ್ನು ಚುರುಕು ಗೊಳಿಸಿ ,ದ್ವಾದಶಿಯಂದು ಚೀಕಲಪರವಿ ಗ್ರಾಮವನ್ನು ಸಂಪೂರ್ಣ ಜಾಲವ್ರುವುತ್ತ ಗೊಳಿಸಿ, ತನ್ನ ತಟದಲ್ಲಿದ್ದ ಶ್ರೀ ನರಸಿಂಹ ದೇವರ ಕಟ್ಟೆ ಜೊತಿಗೆ ಇಡಿ ಊರನ್ನು ಆಪೋಶನ ಮಾಡಿದಳು.

ಎಂದೆಂದೂ ಕಂಡರಿಯದ ಸುಮಾರು ಇಪ್ಪತ್ತು ಆಳು ನೀರು ನಮ್ಮ ಊರನ್ನು ಆವರಿಸಿದಾಗ ಆಗುವ ಅನುಭವ ಮಾತಿನಲ್ಲಿ ಹೇಳುವುದು ಕಷ್ಟವೇ ಸರಿ. ತುಂಗಭದ್ರೆ ಇಂದ ಕೂಗಳತೆಯ ದೂರದಲ್ಲಿ ಇದ್ದ ಚೀಕಲಪರವಿ ಸಂಪೂರ್ಣ ಜಲಾವ್ರುತ್ತವಾಗಿ ಶ್ರೀ ಅಶ್ವಥ ನರಸಿಂಹ ದೇವರ ಕಟ್ಟೆ ಮತ್ತು ಪಕ್ಕದಲ್ಲಿರುವ ಕಲ್ಯಾಣ ಮಂಟಪ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದವು.ಶ್ರೀ ವಿಜಯದಾಸರ ಮನೆ ಊರಿನ ದಿಬ್ಬದ ಮೇಲೆ ಇರುವುದರಿಂದ ಕೆಲವರು ಶ್ರೀ ವಿಜಯದಾಸರ ಮನೆಯಲ್ಲಿ (ನಮ್ಮ ಮನೆಯಲ್ಲಿ ) ಆಶ್ರಯ ಪಡೆಯಬೇಕಾಯಿತು. ದ್ವಾದಶಿ ಪ್ರತಿ ಕ್ಷಣಕ್ಕೂ ನೀರಿನ ಮಟ್ಟ ಏರುತ್ತ, ಎಲ್ಲರು ತಮ್ಮ ಜೀವವನ್ನು ಕೈಯಲ್ಲ್ಲಿ ಹಿಡಿದುಕೊಂಡು ಕುಳಿತಿರುವಾಗ ಮನೆಗಳು ಬೀಳುವುದು ಶುರುವಾಯಿತು.ಒಂದರ ಮೆಲೊಂದಂತೆ ಮಣ್ಣಿನ ಮನೆಗಳು ಹಾಗು ಕೆಲ ಗಚ್ಚಿನ ಮನೆಗಳು ಬೀಳತೊಡಗಿದವು. ನಮ್ಮ ರೈತರು ಅದಾಗಲೇ ತಮ್ಮ ಮನೆಗಳನ್ನು ತೊರೆದು ನಮ್ಮ ಮನೆಯಲ್ಲಿ ತಮ್ಮ ಜಾನುವಾರು ಹಾಗು ಕೆಲ ಸಾಮಾನುಗಳ ಸಮೇತ ಆಶ್ರಯ ಪಡೆದರು. ದ್ವಾದಶಿ ದಿನ ಮುಂಜಾನೆ ಸುಮಾರು ಎರಡು ಆಳಸ್ಟು ಇರುವ ನೀರು ರಾತ್ರಿ ಆಗುವ ಹೊತ್ತಿಗೆ ನಮ್ಮ ಮನೆಯ ಹದಿನೈದು ಮೆಟ್ಟಿಲುಗಳು ಏರಿ ಇನ್ನು ಐದು ಮೆಟ್ಟಿಲುಗಳು ಅಸ್ಟೇ ಬಾಗಿಲಿಗೆ ಬರುವುದು ಬಾಕಿ ಉಳಿದಿತ್ತು.ಆ ರಾತ್ರಿ ಕಳೆಯುವುದು ಪ್ರತಿ ನಿಮಿಷವು ಒಂದು ಯುಗವಾಗಿಬಿಟ್ಟಿತು. ನಾವು ನಿರಂತರ ದೇವರ ಭಜನೆ ಹಾಗು ಶ್ರೀ ದಾಸರ ಸ್ಮರಣೆ ಮಾಡುತ್ತಾ ರಾತ್ರಿ ಕಳೆಯುತ್ತಿದ್ದೆವು. ದಿಬ್ಬದ ಮೇಲೆ ಇರುವ ಜನರೆಲ್ಲ ಪರಸ್ಪರ ಸಂಪರ್ಕದಿಂದ ಹಾಗು ಸಹಕಾರದಿಂದ ಧೈರ್ಯ ಕೊಂಡುಕೊಳ್ಳಲು ಪ್ರಯತ್ನಿಸುತ್ತಿದ್ದರು .ಏಕಾದಶಿ ದಿನದಿಂದಲೇ ಮೊಬೈಲ್ ಸಂಪರ್ಕ ಕಳೆದು ಹೋಗಿದ್ದರಿಂದ ಊರು ಅಕ್ಷರಸಹ ದ್ವೀಪವಾಗಿ ಹೋಗಿತ್ತು. ಎಲ್ಲರು ಜೀವವನ್ನು ತಮ್ಮ ಕೈಯಲ್ಲಿ ಹಿಡಿದು ಶ್ರೀ ವಿಜಯರಾಯರ ಹಾಗು ಶ್ರೀ ನರಸಿಂಹ ದೇವರ ಪ್ರಾರ್ಥನೆ ಮಾಡುತ್ತಾ ಇದ್ದರು. ಊರಿನಲ್ಲಿ ಮನೆಗಳು ನಿರಂತರವಾಗಿ ಬೀಳ ತೊಡಗಿದ್ದು ಹಸುಗುಸುಗಳು, ಬಾಣನ್ತಿಯರ ಪರದಾಟ ನೋಡುವುದು ಹೃದಯ ವಿದ್ರಾವಕ ಘಟನೆ, ಯಾವೊದೋ ಒಂದು ಮನೆ ಬಿದ್ದು ಮುದುಕಿ ಸತ್ತು ಹೋಗಿದ್ದಳು, ಜನರು ತಮ್ಮ ಜಾನುವಾರುಗಳನ್ನು ಕಳೆದುಕೊಂಡು ಪರಿತಪಿಸುತ್ತಿದ್ದರು,ಹುಲ್ಲಿನ ಬಣವಿಗಳು ನೀರಿನಲ್ಲಿ ಹರಿದು ಹೋಗಿ ಇದ್ದ ಜಾನುವಾರುಗಳು ಮೇವಿಗೆ ಪರಿತಪಿಸುತ್ತಿದ್ದವು. ನಾವು ಯಾವಾಗಲು ನೋಡಿದ ಸೌಮ್ಯವಾಗಿ ಹರಿಯುವ ತುಂಗೆ ಇವತ್ತು ದೊಡ್ಡ ಸಮುದ್ರದಂತೆ ತನ್ನ ಇಕ್ಕೆಲಗಳಲ್ಲಿ ಇದ್ದ ಸಮಸ್ತ ಊರುಗಳನ್ನು ಮುಳುಗಿಸಿ ಜಲ ಪ್ರಳಯದ ಭೀತಿ ಹುಟ್ಟಿಸಿ ಮುನ್ನುಗ್ಗುತಿದ್ದಳು. ನೀರು ನಮ್ಮ ಮನೆಯ ತನಕ ಅಥವಾ ಮನೆಯ ಮೇಲೆ ಬಂದರೆ ಹೇಗೆ , ಶ್ರೀ ದಾಸರಾಯರ ಅಮೂಲ್ಯ ಆಸ್ತಿಗಳಿಗೆ ಎನೂ ಆಗಬಾರದು ಎಂದು ಮೊದಲು ದೇವರ ಮನೆಯನ್ನು ಭದ್ರವಾಗಿ ಬೀಗದಿಂದ ಮುಚ್ಚಿ ಅದಕ್ಕೆ ನೀರಿನಿಂದ ತೊಂದರೆ ಆಗದಂತೆ ವ್ಯವಸ್ಥೆ ಮಾಡಿದೆವು.
ಮೊದಲು ಒಂದು ತಾಸಿಗೆ ಒಂದು ಮೆಟ್ಟಿಲು ಏರುತಿದ್ದ ನೀರು ಕ್ರಮೇಣ ಒಂದುವರೆ ತಾಸಿಗೆ ಒಂದು ಮೆಟ್ಟಿಲು ಏರುವುದು ಶುರು ವಾಯಿತು. ಆಗ ಸ್ವಲ್ಪ ಬೆಳಗಾಗುವವರೆಗೆ ನೀರು ಶ್ರೀ ವಿಜಯದಾಸರ ಮನೆಯ ಒಳಗಡೆ ಬರುವುದಿಲ್ಲ ಎಂಬುದೂ ಖಾತ್ರಿ ಆಯಿತು.
ಊರಿನ ಕೆಲ ಪ್ರಮುಖರು ,ತ್ರಯೋದಶಿ ಮುಂಜಾನೆ 6-7 ಘಂಟೆಗೆ ಬೋಟೂಗಳು ಬಂದು ಎಲ್ಲ ನಿರಾಶ್ರಿತರನ್ನು ಒಣ ಪ್ರದೇಶಕ್ಕೆ ಕರೆದೋಯ್ಯುತ್ತವೆ ಎಂದು ಪ್ರಚಾರ ಮಾಡಿದರು, ಆಗ ಕೂಡ ಸ್ವಲ್ಪ ಧೈರ್ಯ ಬಂದಿತು.ಮುಂಜಾನೆ 9 ಘಂಟೆ ಸುಮಾರಿಗೆ ಎರೆಡೆರಡು ತಾಸಿಗೆ ಒಂದೊಂದು ಮೆಟ್ಟಿಲು ನೀರು ಇಳಿಯುವುದು ಜನರಲ್ಲಿ ಧ್ಯರ್ಯ ಬಂದು ಬೋಟೂಗಳು ಬರುವುದು ಸ್ವಲ್ಪ ತಡವಾದರೂ ಸಾಮಾಧಾನದ ನಿಟ್ಟುಸಿರು ಬಿಟ್ಟರು. ಕೊನೆಗೆ ಒಂದು ಗಂಟೆಗೆ ಬಂದ ಬೋಟೂಗಳು , ಆದಸ್ಟು ಜನರನ್ನು ಒಣ ಪ್ರದೇಶಕ್ಕೆ ಕರೆದು ಕೊಂಡು ಹೋಗಿ ಬಿಟ್ಟು ಮರುದಿನ ಮುಂಜಾನೆ ಕೂಡ ತಮ್ಮ ಕೆಲಸಗಳಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದವು. ಮೂರು ದಿನದಲ್ಲಿ , ನೀರಿನ ಪ್ರವಾಹ ಸಂಪುರ್ಣ ಇಳಿದರು, ಊರಿನಲ್ಲಿ ಸತ್ತ ಜಾನುವಾರುಗಳಿಂದ ಹೊಲಸು ವಾಸನೆ ಉಂಟಾಗಿ,ಸಾಂಕ್ರಾಮಿಕ ರೋಗದ ಭೀತಿ ಇಂದ ನಾವುಗಳು ಊರು ಬಿಡಬೇಕಾಯಿತು.ಊರಿನಲ್ಲಿ ಈಗ ಹದಿನೈದು ದಿನ ಕಳೆದರು ,ಕುಡಿಯುದಕ್ಕೆ ಸ್ವಚ್ಹ ನೀರುಇಲ್ಲ, ಕರ್ರೆಂಟಿನ ಮಾತಂತೂ ಕೇಳವೇ ಬೇಡಿ. ಶ್ರೀ ವಿಜಯ ದಾಸರ ಮನೆ, ನೀರಿನ ರಭಸಕ್ಕೆ, ತಳಗಿನ ಪಾಯದ ಮಣ್ಣೆಲ್ಲ ಕೊಚ್ಹಿ ಹೋಗಿ , ಎರಡು ಭಾಗವಾಗಿ ಸೀಳಿ ಹೋಗಿದೆ. ಇನ್ನು ನೀರಿನಿಂದ ರಕ್ಷಿಸಲು ಕಟ್ಟಿದ್ದ ಕೋಟೆ ಗೋಡೆ ಸಂಪೂರ್ಣ ವಾಗಿ ಬಿದ್ದು ಹೋಗಿದೆ.ಅದ್ರಷ್ಟವಷಾತ್, ಶ್ರೀ ವಿಜಯದಾಸರು ಪೂಜಿಸಿದ ಪ್ರತಿಮೆಗಳು ಹಾಗು ಅವರು ಕಾಶಿ ಇಂದ ತಂದ ಸಾಣೆಕಲ್ಲು ಹಾಗು ಕೆಲ ಅಪರೂಪದ ಪುಸ್ತಕಗಳನ್ನು ಯಾವುದೇ ಧಕ್ಕೆಯಾಗದಂತೆ ದೇವರು ಕಾಪಾಡಿದ್ದಾನೆ. ಊರಿನಲ್ಲಿ ಹಾಗು ಶ್ರೀ ವಿಜಯ ದಾಸರ ಮನೆ (ನಮ್ಮ ಮನೆ)ಯಲ್ಲಿ ಯಾವಾಗಲೋ ಕಟ್ಟಿದ್ದ ಹಗೆಗಳು ಬಿರುಕು ಬಿಟ್ಟು ಕಂದಕಗಳು ಉಂಟಾಗಿವೆ. ತೀವ್ರ ಮಣ್ಣಿನ ಕೊರೆತದಿಂದ ಇಡಿ ಮನೆಯು landslide ನಿಂದ ಬಿದ್ದು ಹೋಗಬಹುದಾದ ಆತಂಕ ಮನೆ ಮಾಡಿದೆ. ಆದರೆ ಬರುವ ವಿಜಯದಾಸರ ಆರಾಧನೆಗೆ ಯಾವುದೇ ಆತಂಕವಿಲ್ಲದೆ ಭಕ್ತರು ಚೀಕಲಪರವಿಗೆ ಬಂದು ಆರಾಧನೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ನಾವು ಅವಿರತವಾಗಿ ಶ್ರಮಿಸುತ್ತಿದ್ದೇವೆ.ಯಂದಿನಂತೆ ಶ್ರೀ ದಾಸರಾಯರ ಆರಾಧನೆಯನ್ನು ಅತ್ಯಂತ ವೈಭವದಿಂದ ಆಚರಿಸಲು ಸಜ್ಜಾಗಿದ್ದೇವೆ.
-malegiri Das

h1

ಕೇಳುವದರೊಳಗೆ ಕಳೆದೆಯಲ್ಲ ದಿನ …

October 19, 2009

ರಾಯಚೂರು ಶೇಷಗಿರಿ ದಾಸ್ ಹಾಡುಗಾರಿಕೆಯಲ್ಲಿ ಕೇಳಿದ ಗೋವಿಂದ ದಾಸರ ಪದ.

ಕೇಳುವದರೊಳಗೆ ಕಳೆದೆಯಲ್ಲ ದಿನ
ಮಾಡುವದೆಂದು ಹೇಳಲೆ ಮನವೆ

ಮನನ ಮಾಡಿ ಮಾಧವನ ಮಹಿಮೆಯ
ಅನುಭವಕೆ ತಾರದೆ ಈ ಪರಿಯಲ್ಲಿ ನೀ ಬರಿ …

ಪರರ ಹರಟೆಗೆ ಪರವಶನಾಗುತ
ನಿರುತ ಈ ಪರಿ ಕಾಲ ಕಳೆವೆ ಮರಳಿ
ಹರಿ ಸ್ಮರಿಸಿರೆಂದು ಡಂಗುರ ಹೊಯ್ಯುವ
ಗುರು ಹಿರಿಯರ ನುಡಿಗಳನೆ …

ಹೆಣ್ಣು ಮಣ್ಣು ಹಣವನ್ನು ನಂ-
ಬಿ ನೀ ಕೆಡದಿರೆಲೊ ಎಂದೆನುತ
ಚನ್ನಾಗಿ ಸರ್ವತ್ರ ಕೇಳಿ ನೀ
ಮುನ್ನಿನಂತೆ ಆಚರಿಸುತ್ತಿರುವೆಯಾ

ಜ್ಞಾನವಿಟ್ಟು ಪವಮಾನ ವಂದಿತನ
ಗಾನ ಮಾಡು ಶ್ರೀ ಹರಿ ಗುಣವ
ಮನದ ಸಿರಿ ಗೋವಿಂದ ವಿಠ್ಠಲಗೆ
ಹೀನ ಲೇಸುಗಳ ಅರ್ಪಿಸು ಮರೆಯದೆ

h1

ನಕ್ಷತ್ರ ಭೂಷಣ …

September 23, 2009

ಮೊನ್ನೆ ನನ್ನಪ್ಪ ಈ ಶಿವಸ್ತುತಿಯನ್ನ ಟೈಪ್ ಮಾಡಿ ಕಳಿಸಿದ್ರು. ಕಾಖಂಡಕಿ ಕೃಷ್ಣದಾಸರು ಈ ಕೃತಿಯಲ್ಲಿ ನಕ್ಷತ್ರಗಳ ಹೆಸರುಗಳನ್ನ ಬಳಸಿಕೊಂಡು ಶಿವನನ್ನ ಸ್ತುತಿಸುತ್ತಾರೆ. ನಕ್ಷತ್ರಗಳ ಹೆಸರನ್ನ ಸೂಚ್ಯವಾಗಿ ತಿಳಿಸುತ್ತಾರಷ್ಟೆ ಹೊರತು ನೇರವಾಗಿ ಹೆಸರನ್ನೇ ಹೇಳಿಬಿಡುವದಿಲ್ಲ.

ನಕ್ಷತ್ರ ರಮಣನಯ್ಯನಿಗೊಲಿದು ಶರವನಿತ್ತೆ
ನಕ್ಷತ್ರದೊಲ್ಲಭನ ತಮ್ಮನ ಸುತನ ಸುಟ್ಟೆ
ನಕ್ಷತ್ರ ಇಲ್ಲದವನ ವೈರಿಗಮನನ ತಾತ
ನಕ್ಷತ್ರ ಕಾಂತ ಧರನೆ||
ನಕ್ಷತ್ರಜಾತನಗ್ರಜನ ಮಸ್ತಕವ ತರಿದೆ
ನಕ್ಷತ್ರ ಸಹಸ್ರ ಉಳ್ಳವನ ದ್ವಾರವನ್ನು ಕಾಯ್ದೆ
ನಕ್ಷತ್ರ ನೀನೇ ಇಂದ್ರಾದಿ ದೇವತೆಗಳಿಗೆ ಗುರುಮಹಿಪತಿಸ್ವಾಮಿ
ನಕ್ಷತ್ರ ಭೂಷಣ ಸಲಹೂ||

ನನ್ನಪ್ಪ ಇದರಲ್ಲಿನ ನಕ್ಷತ್ರಗಳ ಹೆಸರನ್ನು ಇಲ್ಲಿ ಉಲ್ಲೇಖಿಸಿರುವ  ಕ್ರಮದಲ್ಲೇ ಬರೆದು ಕಳಿಸಿದ್ರು.  ಆದರೆ ನಾನೀಗ ಕ್ರಮ ತಪ್ಪಿಸಿ ಕೊಡ್ತಾ ಇದ್ದೇನೆ, ನೋಡಿ ನಿಮಗೆ ಯಾವದು ಯಾವ ಸಾಲಿಗೆ ಅಂತ ಗೊತ್ತಾಗುತ್ತಾ ಅಂತ :) .

ಚಂದ್ರ, ಉತ್ತರ, ಆಶ್ಲೇಷ, ರೋಹಿಣಿ, ಜೇಷ್ಠ, ಶ್ರವಣ, ಚಿತ್ತ, ಹಸ್ತಾ

ಕೊ.: ನಕ್ಷತ್ರಗಳ ಸಾಲಿನಲ್ಲಿ ಚಂದ್ರ ಯಾಕೆ ಬಂದ ಅಂತಿರ? ‘ನಕ್ಷತ್ರಾಣಾಮ ಶಶಿ’ ಅಂತಾನೆ ಕೃಷ್ಣ  ಗೀತೆಯಲ್ಲಿ. ಚಂದ್ರ ನಕ್ಷತ್ರಗಳಿಗೆ ಒಡೆಯನಂತೆ.

h1

ಶ್ರವಣ

September 20, 2009

ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಂ|
ಅರ್ಚನಂ ವಂದನಂ ದಾಸ್ಯಂ ಸಖ್ಯಮಾತ್ಮ ನಿವೇದನಂ||

ನವವಿಧ ಭಕ್ತಿಗಳನ್ನ ಹೇಳುವ ಈ‌ ಶ್ಲೋಕವನ್ನ ಹಿರಿಯರೊಬ್ಬರು ಬಹಳ ಹಿಂದೆ ಬರೆದುಕೊಟ್ಟಿದ್ದರು. ಇದರ ಜೊತೆಗೆ ಪ್ರತಿಯೊಂದು ವಿಧದ ಭಕ್ತಿಗೂ ಹೆಸರಾದ ಒಬ್ಬೊಬ್ಬರ ಹೆಸರನ್ನೂ‌  ಬರೆದುಕೊಟ್ಟಿದ್ದರು. ನನ್ನ ಒಂದೂವರೆ ವರ್ಷದ ಮಗನ ಕೈಗೆ ನಿಲುಕುವಂತೆ ಇಟ್ಟಿದ್ದ ಪುಸ್ತಕಗಳ ಕಡೆ ಅವನ ಆಸಕ್ತಿ ಹೆಚ್ಚಾಗಿ, ಪುಸ್ಕ್ತಕಗಳ ಕಟ್ಟು  ಸಡಿಲವಾಗತೊಡಗಿದ್ದರಿಂದ ಅವಕ್ಕೆಲ್ಲ ಇನ್ನೊಂದು ಎತ್ತರದ ಸ್ಥಳದಲ್ಲಿ ಜಾಗ ಮಾಡುವಾಗ ಆ ಹಿರಿಯರು ಬರೆದು ಕೊಟ್ಟಿದ್ದ ಚೀಟಿ ಸಿಕ್ಕಿತು. ಹೇಗಿದ್ದರೂ ನವರಾತ್ರಿ ಆರಂಭವಾಗಿದೆ, ಈಗಾಗಲೇ ಎರಡು ದಿನಗಳು ಆಗಿ ಹೋಗಿದ್ದರೂ ಇವತ್ತು ಶ್ರವಣವನ್ನಾದರೂ‌ ಉಲ್ಲೇಖಿಸಬೇಕು ಅನಿಸಿತು.

ಒಂದು ವಾರದ ಜೀವನ ಮಾತ್ರ ಬಾಕಿ ಇರುವದು ಎಂದು ತಿಳಿದಾಗ ಉಳಿದ ಆಯುಷ್ಯವನ್ನ ವ್ಯರ್ಥ ಕಳೆಯದೆ ದೇವರ ಗುಣ ಕಥನವನ್ನ ಕೇಳುತ್ತ ಕಳೆಯಬೇಕು ಎಂದು ನಿರ್ಧರಿಸಿ ಅದರಂತೆ ಗಂಗಾ ತಟದಲ್ಲಿ ಶುಕ ಮುನಿಯಿಂದ ನಿರಂತರ ಪ್ರವಚನ ಕೇಳಿದ ಪರೀಕ್ಷಿತ ರಾಜನೇ ಹರಿ ಕಥಾ ಶ್ರವಣಕ್ಕೆ  ಹೆಸರಾದವನು. ಸಾವು ಬರುವದು ಅಂತ ಅಳಲಿಲ್ಲ, ರಾಜನಾದ ನನಗೇ ಶಾಪವೇ ಅಂತ ಸಿಟ್ಟಿಗೇಳಲಿಲ್ಲ, ಇದ್ದ ಸಮಯವನ್ನ ಸಾರ್ಥಕವಾಗಿ ಕಳೆಯುವದು ಹೇಗೆ ಎನ್ನುವದರ ಕಡೆಗೆ ಮಾತ್ರ ಗಮನ ಹರಿಸಿದ. ಅವನ ಹೆಸರೇ ಪರೀಕ್ಷಿತ, ಹುಟ್ಟುವಾಗಲೇ ಎಲ್ಲವನ್ನೂ‌ ಬೆರಗುಗಣ್ಣಿನಿಂದ ಪರೀಕ್ಷೆ ಮಾಡುವಂತೆ ನೋಡುತ್ತಿದ್ದನಂತೆ, ಅದಕ್ಕಾಗೇ ಪರೀಕ್ಷಿತ ಅಂತ ಹೆಸರಾಯಿತಂತೆ. ಗರ್ಭದಲ್ಲಿದ್ದಾಗಲೇ ಅಶ್ವತ್ಥಾಮನ ಬ್ರಹ್ಮಾಸ್ತ್ರಕ್ಕೆ ಗುರಿಯಾಗಿ ಕೃಷ್ಣನಿಂದ ಉಳಿದಾತ, ಕಡೆಗಾಲಕ್ಕೆ ಆ ಕೃಷ್ಣನ ಕಥೆಯನ್ನೇ ಕೇಳಿ ಆನಂದಿಸಿದಾತ.

ಶ್ರವಣದ ಬಗ್ಗೆ ಜಗನ್ನಾಥ ದಾಸರು ಹರಿಕಥಾಮೃತ ಸಾರದ ೨ನೇ ಸಂಧಿ (ಕರುಣಾ ಸಂಧಿ) ಯಲ್ಲಿ ಹೀಗೇ‌ ಹೇಳುತ್ತಾರೆ,

ಶ್ರವಣ ಮನಕಾನಂದವೀಹುದು
ಭವಜನಿತ ದುಃಖಗಳ ಕಳೆವುದು
ವಿವಿಧ ಭೋಗಗಳಿಹಪರಂಗಳಲಿತ್ತು ಸಲಹುವುದು||
ಭುವನ ಪಾವನನೆನಿಪ ಲಕುಮೀ
ಧವನ ಮಂಗಳ ಕಥೆಯ ಪರಮೋ
ತ್ಸವದಿ ಕಿವಿಗೊಟ್ಟಾಲಿಪುದು ಭೂಸುರರು ದಿನ ದಿನದಿ||

ವಿಜಯ ದಾಸರ ‘ಪವಮಾನ ಪವಮಾನ ಜಗದ ಪ್ರಾಣ’ ಹಾಡಿನಲ್ಲಿ ಹನುಮಂತನನ್ನ ಶ್ರವಣ ಮೊದಲಾದ ನವ ವಿಧ ಭಕ್ತಿಗಳನ್ನ ತವಕದಿಂದ ಕೊಡು ಎಂದು ಕೇಳುತ್ತಾರೆ. ಕೇಳುವವರಿಗೆ ಯಾವಾಗ ದೊರಕೀತು ಎನ್ನುವ ತವಕ ಇರುವದೇನೂ ಆಶ್ಚರ್ಯವಲ್ಲ, ಆದರೆ ಇಲ್ಲಿ ದಾಸರು ಆ ಪವಮಾನನಿಗೆ ತವಕದಿಂದ ಕೋಡು, ಬೇಗ ಕೋಡು ಅಂತ ಕೇಳ್ತಾ ಇದ್ದಾರೆ. ನನ್ನಮ್ಮನ ಬಾಯಲ್ಲಿ ಈ‌ ಹಾಡನ್ನ ಬಹಳಷ್ಟು  ಬಾರಿ ಕೇಳಿದ್ದೇನೆ. ಇಲ್ಲಿ ಈ‌ ಹಾಡಿನ ಸಾಹಿತ್ಯ ಇದೆ ಮತ್ತು ಯೂ ಟ್ಯೂಬಿನ ಲಿಂಕ್ ಕೂಡ ಇದೆ.

h1

Shahrukh Khan and a short story

September 14, 2009

Many years ago I read a kannada short story, probably in the Sudha Ugadi Vishesanka. It was about a young boy who realizes he could change his face to any other face just by thinking about that and touching his face at few places.  He stumbles upon this skill while trying to act like a mimicry artist he had seen at school. Next day he goes to his teachers and shows them the new skill, shows it to his friends. Every one is thrilled that he can change his face to be like that of Gandhi, Nehru, their Head Master, just about any one they can ask him to be. He hones the skill and becomes very popular all over the country over the years. After many many years his School wants to host his show again. By then he has used his skill so much that he doesn’t even need to touch his face to become like some one else. He just has to think about a face and his face changes. While that’s great for his profession, it is causing him a lot of trouble. He can look like any random person on the street but he cannot look like himself!

I don’t remember the name of the Author or even the name of the story. Remembered that story again last week end while listening to this interview of Shahrukh Khan.  He says he cannot recognize himself now when the camera is not on, some times even when it is on. He talks about how he feels that a part of himself is lost in every role he does. One day, he says, he may loose every thing and stop acting! Check out this youtube video starting at 1:35.

[PS: In case any of you know the Kannada short story's name, author's name, please let me know]